ಮೇ.22: ಪಾಂಚಜನ್ಯ ಯಕ್ಷಕಲಾ ವೃಂದ ಇದರ ವಾರ್ಷಿಕೋತ್ಸವದ ಪ್ರಯುಕ್ತ ಯಕ್ಷ ಚಿಣ್ಣರ ರಂಗ ಪ್ರವೇಶ , ಯಕ್ಷಗಾನ

0

ಪುತ್ತೂರು: ಪಾಂಚಜನ್ಯ ಯಕ್ಷಕಲಾ ವೃಂದ ಇದರ ವಾರ್ಷಿಕೋತ್ಸವದ ಪ್ರಯುಕ್ತ ಯಕ್ಷ ಚಿಣ್ಣರ ರಂಗ ಪ್ರವೇಶದೊಂದಿಗೆ ,ಬಾಲಕೃಷ್ಣ ಪೂಜಾರಿ ಉಡ್ಡಂಗಳ ಇವರ ನಿರ್ದೇಶನ ದಲ್ಲಿ ’ಸ್ವಯಂಪ್ರಭಾ ಪರಿಣಯ ಹಾಗೂ ರಾಜಾವೈಖಾನಸ” ಯಕ್ಷಗಾನವು ಮೇ22ರಂದು ಸಂಜೆ 5.00ಗಂಟೆಗೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ನಟರಾಜ ವೇದಿಕೆಯಲ್ಲಿ ನಡೆಯಲಿದೆ. ದೀಪ ಪ್ರಜ್ವಲನೆಯನ್ನು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಪುತ್ತೂರು ಇದರ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವ ಪ್ರಸಾದ್ ಮುಳಿಯ ನೆರವೇರಿಸಲಿರುವರು.

ಅತಿಥಿಗಳಾಗಿ ತೆಂಕಿಲ ವಿವೇಕಾನಂದ ಅಂಗ್ಲ ಮಾದ್ಯಮ ಶಾಲೆಯ ಸಂಸ್ಕೃತ ಶಿಕ್ಷಕ ವೆಂಕಟೇಶ್ ಪ್ರಸಾದ್ , ಶ್ರೀ ಶಾರದ ಭಜನಾ ಮಂದಿರ ಪುತ್ತೂರು ಇದರ ಉಪಾಧ್ಯಕ್ಷರಾದ ಗೋಪಾಲ ನಾಯಕ್ ಭಾಗವಹಿಸಲಿದ್ದಾರೆ ಎಂದು ಸಂಯೋಜಕರಾದ ಬಾಲಕೃಷ್ಣ ಹಂದ್ರಟ್ಟ ತಿಳಿಸಿದ್ದಾರೆ.  ಮಾಹಿತಿಗಾಗಿ: 9980209384,9482247058

LEAVE A REPLY

Please enter your comment!
Please enter your name here