ಇಂದು ಪಾಂಚಜನ್ಯ ಯಕ್ಷಕಲಾ ವೃಂದದ ವಾರ್ಷಿಕೋತ್ಸವದ ಪ್ರಯುಕ್ತ ಯಕ್ಷ ಚಿಣ್ಣರ ರಂಗ ಪ್ರವೇಶ, ಯಕ್ಷಗಾನ

0

ಪುತ್ತೂರು: ಪಾಂಚಜನ್ಯ ಯಕ್ಷಕಲಾ ವೃಂದ ಇದರ ವಾರ್ಷಿಕೋತ್ಸವದ ಪ್ರಯುಕ್ತ ಯಕ್ಷ ಚಿಣ್ಣರ ರಂಗ ಪ್ರವೇಶದೊಂದಿಗೆ ಬಾಲಕೃಷ್ಣ ಪೂಜಾರಿ ಉಡ್ಡಂಗಳ ಇವರ ನಿರ್ದೇಶನದಲ್ಲಿ ಸ್ವಯಂಪ್ರಭಾ ಪರಿಣಯ ಹಾಗೂ ರಾಜಾವೈಖಾನಸ” ಯಕ್ಷಗಾನವು ಮೇ.೨೨ರಂದು ಸಂಜೆ ೫.೦೦ಗಂಟೆಗೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ನಟರಾಜ ವೇದಿಕೆಯಲ್ಲಿ ನಡೆಯಲಿದೆ.
ಕಾರ್ಯಕ್ರಮದಲ್ಲಿ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವ ಪ್ರಸಾದ್ ಮುಳಿಯ ದೀಪ ಪ್ರಜ್ವಲನೆಯನ್ನು ನೆರವೇರಿಸಲಿರುವರು.
ಅತಿಥಿಗಳಾಗಿ ತೆಂಕಿಲ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ಸಂಸ್ಕೃತ ಶಿಕ್ಷಕ ವೆಂಕಟೇಶ್ ಪ್ರಸಾದ್, ಶ್ರೀ ಶಾರದ ಭಜನಾ ಮಂದಿರ ಪುತ್ತೂರು ಇದರ ಉಪಾಧ್ಯಕ್ಷರಾದ ಗೋಪಾಲ ನಾಕ್ ಭಾಗವಹಿಸಲಿದ್ದಾರೆ ಎಂದು ಸಂಯೋಜಕರಾದ ಪದ್ಮನಾಭ ಜಿ. ಅಂದ್ರಟ್ಟ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here