ಪುತ್ತೂರು ಬ್ಲಾಕ್ ಕಾಂಗ್ರೆಸ್ ಸಾಮಾಜಿಕ ಜಾಲತಾಣಗಳ ಅಧ್ಯಕ್ಷರಾಗಿ ಸಿದ್ದೀಕ್ ಸುಲ್ತಾನ್ ಕೂಡುರಸ್ತೆ

0

ಪುತ್ತೂರು: ಪುತ್ತೂರು ಬ್ಲಾಕ್ ಕಾಂಗ್ರೆಸ್ ಸಾಮಾಜಿಕ ಜಾಲತಾಣಗಳ ಅಧ್ಯಕ್ಷರಾಗಿ ಸಿದ್ದೀಕ್ ಸುಲ್ತಾನ್ ಕೂಡುರಸ್ತೆಯವರನ್ನು ನೇಮಕ ಮಾಡಲಾಗಿದೆ. ಮಾಜಿ ಶಾಸಕಿ ಶ್ರೀಮತಿ ಶಕುಂತಳಾ ಶೆಟ್ಟಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಬಿ ವಿಶ್ವನಾಥ ರೈ, ಪ್ರಧಾನ ಕಾರ್ಯದರ್ಶಿ ಪೂರ್ಣೇಶ್ ಕುಮಾರ್ ಭಂಡಾರಿಯವರ ಆದೇಶದ ಹಾಗೂ ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ ಶಿವಕುಮಾರ್ ಅವರ ಅನುಮೋದನೆಯ ಮೇರೆಗೆ ಕೆಪಿಸಿಸಿ ಸಾಮಾಜಿಕ ಜಾಲತಾಣ ಅಧ್ಯಕ್ಷರಾದ ಬಿ.ಆರ್.ನಾಯ್ಡು, ಜಿಲ್ಲಾಧ್ಯಕ್ಷರಾದ ಸಚಿನ್‌ರಾಜ್ ಶೆಟ್ಟಿಯವರು ಈ ನೇಮಕ ಮಾಡಿದ್ದಾರೆ.


ಉಪಾದ್ಯಕ್ಷರಾಗಿ ಸುಪ್ರೀತ್ ಕಣ್ಣರಾಯ ಮುಂಡೂರು, ಗಿರೀಶ್ ಗೋಲ್ವಾಲ್ಕರ್, ಪ್ರಧಾನ ಕಾರ್ಯದರ್ಶಿಗಳಾಗಿ ಪೃಥ್ವಿರಾಜ್ ವಳತ್ತಡ್ಕ, ಸಿಮ್ರಾನ್ ಪುತ್ತೂರು, ಸಿದ್ದೀಕ್ ಪರಾರಿ, ಶರೀಫ್ ನಿಡ್ಪಳ್ಳಿ, ಕಾರ್ಯದರ್ಶಿಗಳಾಗಿ ಜುನೈದ್ ಬಡಗನ್ನೂರು, ಶಾನವಾಝ್ ಬಪ್ಪಳಿಗೆ, ಮುಸ್ತಫಾ ಜಿ.ಎಂ, ಅಶೋಕ್ ಇಳಂತಾಜೆ, ಹಾರಿಸ್ ಯು.ಕೆ ಅಡ್ಕ, ಸಂತೋಷ್ ಕುಮಾರ್ ಕೌಡಿಚ್ಚಾರ್, ರಫೀಕ್ ಮಾಡನ್ನೂರು, ನಿತಿನ್ ಪೆರ್ಲಂಪಾಡಿ, ಜಮಾಲುದ್ದೀನ್ ಪುರುಷರಕಟ್ಟೆ ಅವರನ್ನು ನೇಮಕ ಮಾಡಲಾಗಿದೆ.

ಬ್ಲಾಕ್ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಸಿದ್ದೀಕ್ ಸುಲ್ತಾನ್ ಅವರು ಈಗಾಗಲೇ ಪಕ್ಷದ ವಿವಿಧ ಹುದ್ದೆಗಳನ್ನು ನಿಭಾಯಿಸಿದ್ದು ವಿವಿಧ ಸಂಘ ಸಂಸ್ಥೆಗಳಲ್ಲೂ ಸಕ್ರಿಯರಾಗಿದ್ದಾರೆ. ಸಾಮಾಜಿಕ, ಧಾರ್ಮಿಕ ಹಾಗೂ ಶೈಕ್ಷಣಿಕ ಸಂಸ್ಥೆಗಳಲ್ಲೂ ಪದಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.

LEAVE A REPLY

Please enter your comment!
Please enter your name here