ನರಿಮೊಗರು ಗ್ರಾ.ಪಂ ವತಿಯಿಂದ ಶ್ರೀದುರ್ಗಾ ಸಂಜೀವಿನಿ ಒಕ್ಕೂಟದ ನೂತನ ಪದಾಧಿಕಾರಿಗಳ ಆಯ್ಕೆ, ಒಣ ತ್ಯಾಜ್ಯ ಘಟಕ ಮತ್ತು ಸ್ವಚ್ಛವಾಹಿನಿ ಹಸ್ತಾಂತರ ಕಾರ್ಯಕ್ರಮ

0

ಪುತ್ತೂರು: ನರಿಮೊಗರು ಗ್ರಾ.ಪಂ ವತಿಯಿಂದ ಶ್ರೀದುರ್ಗಾ ಸಂಜೀವಿನಿ ಒಕ್ಕೂಟದ ನೂತನ ಪದಾಧಿಕಾರಿಗಳ ಆಯ್ಕೆ, ಹಾಗೂ ಒಣ ತ್ಯಾಜ್ಯ ಘಟಕ ಮತ್ತು ಸ್ವಚ್ಛವಾಹಿನಿ ಹಸ್ತಾಂತರ ಕಾರ್ಯಕ್ರಮ ಮೇ.19ರಂದು ನರಿಮೊಗರು ಗ್ರಾ.ಪಂ ಸಭಾ ಭವನದಲ್ಲಿ ನಡೆಯಿತು.

 

ಪುತ್ತೂರು ತಾಲೂಕು ಎನ್‌ಆರ್‌ಎಲ್‌ಎಂ ವ್ಯವಸ್ಥಾಪಕ ಜಗತ್‌ರವರು ಎನ್‌ಆರ್‌ಎಲ್‌ಎಂ ಯೋಜನೆ ಮತ್ತು ಮಹಿಳಾ ಸಬಲೀಕರಣ ಬಗ್ಗೆ ಮಾತನಾಡಿದರು. ಪುತ್ತೂರು ತಾಲೂಕು ಆರ್ಥಿಕ ಸಾಕ್ಷರತಾ ಕೇಂದ್ರದ ಎಫ್‌ಎಲ್‌ಸಿ ಗೀತಾ ವಿಜಯ್ ಬ್ಯಾಂಕಿಂಗ್ ಸೇವೆಯ ಬಗ್ಗೆ ಮಾಹಿತಿ ನೀಡಿದರು. ಗ್ರಾ.ಪಂ ಅಧಿಕಾರಿ ರವಿಚಂದ್ರ ಯು ಪ್ರಾಸ್ತಾವಿಕವಾಗಿ ಮಾತನಾಡಿದರು. ನರಿಮೊಗರು ಗ್ರಾ.ಪಂ ಉಪಾಧ್ಯಕ್ಷರಾದ ಸುಧಾಕರ ಕುಲಾಲ್, ಕಾರ್ಯದರ್ಶಿಯಾದ ಖಲಂದರ್ ಅಲಿ, ಸಂಜೀವಿನಿ ಒಕ್ಕೂಟದ ನಿಕಟ ಪೂರ್ವ ಅಧ್ಯಕ್ಷರಾದ ಜಯಲಕ್ಷ್ಮಿ, ನೂತನ ಅಧ್ಯಕ್ಷೆ ಮೋಹಿನಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಂಜೀವಿನಿ ಮುಖ್ಯ ಪುಸ್ತಕ ಬರಹಗಾರರಾದ ಅನುರಾಧ ಸ್ವಾಗತಿಸಿ ವಂದಿಸಿದರು.

LEAVE A REPLY

Please enter your comment!
Please enter your name here