ಪುತ್ತೂರು: ಬಲ್ನಾಡು ಶ್ರೀ ದಂಡನಾಯಕ ಉಳ್ಳಾಲ್ತಿ ದೈವಸ್ಥಾನದ ಪ್ರಧಾನ ಅರ್ಚಕರಾಗಿ ಕಳೆದ 26 ವರ್ಷಗಳಿಂದ ಸೇವೆ ಸಲ್ಲಿಸುತ್ತಾ ಬಂದಿರುವ ಸದಾಶಿವ ನೆಲ್ಲಿತ್ತಾಯ (86ವ)ರವರು ಮೇ 24ರಂದು ರಾತ್ರಿ ನಿಧನರಾದರು.
ಬಲ್ನಾಡಿನ ದೈವಸ್ಥಾನದಲ್ಲಿ ವರ್ಷಾವಧಿ ಪತ್ತನಾಜೆಯಂದು ನಡೆಯುವ ವರ್ಷದ ಕೊನೆಯ ಕಾರ್ಯಕ್ರಮಗಳು ಮುಗಿದ ಬಳಿಕ ನೆಲ್ಲಿತ್ತಾಯರು ಇಹಲೋಕ ತ್ಯಜಿಸಿರುವುದು ಜೀವಮಾನದ ಅವರ ಸೇವಾತತ್ಪರತೆಯ ಪೂರ್ಣತೆಯನ್ನು ಬಿಂಬಿಸುತ್ತದೆ.
ಕಳೆದ ಜಾತ್ರೆಯಲ್ಲಿ ಸುದ್ದಿ ಮೀಡಿಯಾದಲ್ಲಿ ಸಂದರ್ಶನ ನಡೆದಿತ್ತು:
ಕಳೆದ ಜಾತ್ರೆಯ ವೇಳೆಯಲ್ಲಿ ಸುದ್ದಿ ಯೂಟ್ಯೂಬ್ ಚಾನೆಲ್ನಲ್ಲಿ ನಡೆಸಿದ ವಿಡಿಯೋ ಸಂದರ್ಶನದಲ್ಲಿ ಬಲ್ನಾಡಿನ ಕುರಿತಾದ ವಿಶೇಷ ಮಾಹಿತಿಯನ್ನು ಅವರು ನೀಡಿದ್ದರು.
ಮೃತರು ಪುತ್ರರಾದ ಮೋಹನ್ ನೆಲ್ಲಿತ್ತಾಯ , ಪುತ್ತೂರು ಜೀವಾ ವಿಮಾ ನಿಗಮದ ಮ್ಯಾನೆಜರ್ ಜಯರಾಮ ನೆಲ್ಲಿತ್ತಾಯ, ಪುತ್ರಿ ಮಾಲತಿ ಹಾಗೂ ಮೊಮ್ಮಕ್ಕಳನ್ನು ಅಗಲಿದ್ದಾರೆ.