ಪಾಣಾಜೆ; ಕಟ್ಟಡ ಕಾರ್ಮಿಕರ ಉಚಿತ ಆರೋಗ್ಯ ತಪಾಸಣಾ ಶಿಬಿರ ಉದ್ಘಾಟನೆ

0

ನಿಡ್ಪಳ್ಳಿ; ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯ ವತಿಯಿಂದ ಕಾರ್ಮಿಕ ಮಂಡಳಿಯಲ್ಲಿ ನೋಂದಾಯಿತರಾದ ಸದಸ್ಯರಿಗೆ ಹಾಗೂ ಅವರ ಅವಲಂಬಿತರಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರದ ಉದ್ಘಾಟನೆ ಪಾಣಾಜೆ ಗ್ರಾಮ ಪಂಚಾಯತ್ ಸಭಾಭವನದಲ್ಲಿ   ಮೇ.26 ರಂದು ನಡೆಯಿತು.
       
ಪಂಚಾಯತ್ ಉಪಾಧ್ಯಕ್ಷ ಅಬೂಬಕ್ಕರ್.ಕೆ ದೀಪ ಬೆಳಗಿಸಿ ಉದ್ಘಾಟಿಸಿದರು. ಪಂಚಾಯತ್ ಸದಸ್ಯರಾದ ಕೃಷ್ಣಪ್ಪ ಪೂಜಾರಿ, ನಾರಾಯಣ ನಾಯಕ್, ಜಯಶ್ರೀ, ಮೋಹನ ನಾಯ್ಕ, ಕಾರ್ಯದರ್ಶಿ ಆಶಾ, ಸಿಬ್ಬಂದಿಗಳಾದ ವಿಶ್ವನಾಥ ನಾಯ್ಕ, ಸೌಮ್ಯಶ್ರೀ, ರೂಪಾಶ್ರೀ, ಅರುಣ್ ಕುಮಾರ್ ಉಪಸ್ಥಿತರಿದ್ದರು. ಪಿಡಿಒ ಚಂದ್ರಮತಿ ಸ್ವಾಗತಿಸಿ ವಂದಿಸಿದರು.  ಡಾ.ತೇಜಸ್ ಮತ್ತು ತಂಡದವರಿಂದ ಕಾರ್ಮಿಕರ ತಪಾಸಣಾ ಶಿಬಿರ ನಡೆಯಿತು.


LEAVE A REPLY

Please enter your comment!
Please enter your name here