ಮನೆ, ಕಛೇರಿ, ಕಟ್ಟಡಗಳ ಒಳ, ಹೊರ ವಿನ್ಯಾಸದಲ್ಲಿ 30% ರಿಯಾಯಿತಿ…

0

  • ಮಂಗಳೂರಿನ ಹೆಸರಾಂತ ನೆಹಲ್ ಏಫ್ ಎಂ ಐ ಮೊದಲ ಶಾಖೆ ಪುತ್ತೂರಿನಲ್ಲಿ ಆರಂಭ

 

ಪುತ್ತೂರು : ಜರ್ಮನಿ ಮೂಲದ ಅತ್ಯಾಧುನಿಕ ಯಂತ್ರೋಪಕರಣಗಳನ್ನೂ ಬಳಸಿಕೊಂಡು, ತನ್ನದೇ ಸ್ವಂತ ಕಾರ್ಖಾನೆ ಯಲ್ಲೇ ತಯಾರುಪಡಿಸಿರುವಂಥ ಗುಣಮಟ್ಟವುಳ್ಳ ಉತ್ಪನ್ನಗಳಿಂದ, ನುರಿತ ಕಾರ್ಮಿಕ ವರ್ಗದ ಜೊತೆಗೆ ಅಚ್ಚರಿಯ ರೀತಿಯಲ್ಲಿ ಮನೆ ಕಛೇರಿ ಹಾಗೂ ಕಟ್ಟಡಗಳ ಒಳಾಂಗಣ, ಹೊರಾಂಗಣ ವಿನ್ಯಾಸ ಮಾಡುವಲ್ಲಿ ಸೈಯೆನಿಸಿ,ಕಡಲನಗರಿ ಜನತೆಯ ಮನ ಗೆದ್ದಿರುವ ಹೆಸರಾಂತ ಸಂಸ್ಥೆ, ಕಳೆದ 7 ವರುಷಗಳಿಂದ ಸುರತ್ಕಲ್ ಬಳಿ ಕಛೇರಿಯನ್ನು ಹೊಂದಿ ,ಬೈಕಂಪಾಡಿ ಬಳಿ ಕಾರ್ಖಾನೆಯನ್ನು ಹೊಂದಿರುವಂಥ, ಪುತ್ತೂರಿನ ಅನ್ಸಾರ್ ಪರ್ಪುಂಜ ಹಾಗೂ ಮಂಗಳೂರಿನ ಜಗದೀಶ್ ಜೆ. ಕಾಂಚನ್ ಇವರ ಪಾಲುದಾರಿಕೆಯಲ್ಲಿ ಆರಂಭಗೊಂಡಿರುವ ನೆಹಲ್ ಏಫ್ ಎಂ ಐ ಇಂಟೀರಿಯರ್ ಇದರ ಮೊದಲ ಶಾಖೆಯೂ , ಮೇ 26 ರಂದು, ನೆಹರುನಗರ ಪಟ್ಲ ಸಂಕೀರ್ಣ ದ ಮೊದಲ ಮಹಡಿಯಲ್ಲಿ ಸಾಲ್ಮರ ಸೈಯದ್ ಮಲೆ ಧರ್ಮಗುರುಗಳಾದ ಸೈಯದ್ ಮೊಹಮ್ಮದ್ ತಂಙಳ್ ಇವರ ದುವಾ :ಅಶೀರ್ವಾಚನದೊಂದಿಗೆ ಶುಭಾರಂಭಗೊಂಡಿತು.

 

ಸಾಲ್ಮರ ಜುಮ್ಮಾ ಮಸೀದಿಯ ಖತೀಬ್ ಉಮರ್ ದಾರಿಮಿ ಶುಭಹಾರೈಸಿದರು. ಮಹಮ್ಮದ್ ಜೆಜೆಬಿ ಪರ್ಪುಂಜ ಹಾಗೂ ಅಭ್ಬಾಸ್ ಅಬು ಸಾಲ್ಮರ ಇವರುಗಳು ರಿಬ್ಬನ್ ಕತ್ತರಿಸೋ ಮೂಲಕ ಸಂಸ್ಥೆಯ ಉದ್ಘಾಟನೆ ನೆರವೇರಿಸಿದರು. ಅರಿಯಡ್ಕ ಮಸೀದಿಯ ಅಧ್ಯಕ್ಷ ಹಾಜಿ ಅಬ್ದುಲ್ ರಹಮಾನ್, ಜೆಡಿಎಸ್ ಮುಖಂಡ ಆಶ್ರಫ್ ಕಲ್ಲೇಗ, ಅಲಿ ಬೆಂಗಳೂರು ನೂತನ ಸಂಸ್ಥೆಯ ಅಭಿವೃದ್ಧಿಗೆ ಶುಭಹಾರೈಸಿ ಅಭಿನಂದಿಸಿದರು. ನಝೀರ್ ಸಾಲ್ಮರ, ಖಾಲಿದ್ ಸಾಲ್ಮರ ,ಅನ್ಸಾಫ್ ಸಾಲ್ಮರ, ಆಸಿಫ್ ಉಪ್ಪಿನಂಗಡಿಫೈಝಲ್ ಸಾಲ್ಮರ, ಹನೀಫ್ ಲೀಮಾ, ಅಬ್ಬಾಸ್ ಅರಿಯಡ್ಕ ನವಾಝ್ ಸಾಲ್ಮರ ಸಹಿತ ಹಲವು ಅತಿಥಿಗಳು ಆಗಮಿಸಿ ಹಾರೈಸಿದರು.ಜಾಬೀರ್ ಅರಿಯಡ್ಕ ಸ್ವಾಗತಿಸಿ, ಸಂಸ್ಥೆಯ ಪಾಲುದಾರರಾದ ಅನ್ಸರ್ ಪರ್ಪುಂಜ ಮತ್ತು ಜಗದೀಶ್ ಜೆ. ಕಾಂಚನ್ ವಂದಿಸಿ, ಸಹಕಾರ ಯಾಚಿಸಿದರು.

ಮನೆ, ಕಛೇರಿ, ಕಟ್ಟಡಗಳ ಒಳ, ಹೊರಾಂಗಣ ಗಳನ್ನೂ ತಮ್ಮ ಊಹೆ, ಕಲ್ಪನೆಗೂ ಮೀರಿದ ರೀತಿಯಲ್ಲಿ, ಅತೀ ಕಡಿಮೆಯ ವೆಚ್ಚದಲ್ಲಿ, ನುರಿತ ಕೆಲಸ ಗಾರರಿಂದ,   ಅತೀ ನಾಜೂಕಾಗಿ ನಿರ್ವಹಿಸುತ್ತೇವೆ. ಅನ್ಸಾರ್ ಪರ್ಪುಂಜ ಪಾಲುದಾರ
ಮೊ.8147381976.

LEAVE A REPLY

Please enter your comment!
Please enter your name here