ಪುತ್ತೂರು: ಶ್ರೀ ಕ್ಷೇತ್ರ ಮಾಣಿಲದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿರವರು ಕುದ್ಮಾರು ಗ್ರಾಮದ ಬರೆಪ್ಪಾಡಿ ದೇವಾಲಯದ ಪಂಚಲಿಂಗೇಶ್ವರ ದೇವಾಲಯದ ಜೀರ್ಣೋದ್ಧಾರದ ಪ್ರಯುಕ್ತ ಮೇ31 ರಂದು ನಡೆಯುವ ರುದ್ರಯಾಗ, 108 ತೆಂಗಿನಕಾಯಿ ಮಹಾಗಣಪತಿ ಹೋಮ ಮತ್ತು ನಿಧಿಕುಂಬ ಸಮಾರ್ಪಣಾ ಕಾರ್ಯಕ್ರಮಕ್ಕೆ ಆಗಮಿಸಿ ಭಕ್ತಾದಿಗಳಿಗೆ ಆಶೀರ್ವಚನ ನೀಡಲಿದ್ದಾರೆ.
ಮೇ .26 ರಂದು ಬರೆಪ್ಪಾಡಿ ದೇವಾಲಯದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ವಿಠಲ ಗೌಡ ಬರೆಪ್ಪಾಡಿ, ಧಾರ್ಮಿಕ ಮುಖಂಡ ಅರುಣ್ ಕುಮಾರ್ ಪುತ್ತಿಲ, ಊರವರರಾದ ಚಿದಾನಂದ ಕೆರೆನಾರು ,ಮಿಥುನ್ ದರ್ಖಾಸುರವರುಗಳು ಮಾಣಿಲ ಕ್ಷೇತ್ರಕ್ಕೆ ಭೇಟಿ ನೀಡಿ, ಸ್ವಾಮೀಜಿ ರವರಿಗೆ ಫಲಪುಷ್ಪ ನೀಡಿ ಕಾರ್ಯಕ್ರಮಕ್ಕೆ ಅಮಂತ್ರಿಸಿದರು.