- ತರಕಾರಿ ಅಂಗಡಿಯಿಂದ ಬೊಂಡ ಕಳ್ಳತನ…!
ಪುತ್ತೂರು: ರಾತ್ರಿ ವೇಳೆ ತರಕಾರಿ ಅಂಗಡಿಯ ಪ್ಲಾಸ್ಟಿಕ್ ಹೊದಿಕೆಯನ್ನು ಕತ್ತರಿಸಿದ ಪುಡಿಗಳ್ಳರು ಅಂಗಡಿಯಲ್ಲಿದ್ದ ಬೊಂಡವನ್ನು(ಸಿಯಾಳ) ಕುಡಿದ ಘಟನೆ ಮೇ.26ರಂದು ರಾತ್ರಿ ತಿಂಗಳಾಡಿಯಲ್ಲಿ ನಡೆದಿದೆ.
ಇಲ್ಲಿನ ಸಂತೋಷ್ ಕಾಂಪ್ಲೆಕ್ಸ್ನಲ್ಲಿರುವ ರಫೀಕ್ ತಿಂಗಳಾಡಿಯವರ ಮಾಲಕತ್ವದ ತರಕಾರಿ ಅಂಗಡಿಯಲ್ಲಿ ಈ ಘಟನೆ ನಡೆದಿದ್ದು ಮೇ.27ರ ಬೆಳಗ್ಗೆ ಬೆಳಕಿಗೆ ಬಂದಿದೆ. ಯಾರೋ ಪುಡಿಗಳ್ಳರು ಈ ಕೃತ್ಯ ಎಸಗಿರುವ ಶಂಕೆ ವ್ಯಕ್ತವಾಗಿದ್ದು ಅಂಗಡಿಯಿಂದ ಬೇರೆ ಯಾವುದೇ ವಸ್ತುವಾಗಲೀ, ನಗದು ಆಗಲೀ ಕಳವು ನಡೆದಿಲ್ಲ. ಕುಡಿದ ಬೊಂಡವನ್ನು ಅಂಗಡಿಯ ಪಕ್ಕದಲ್ಲಿರುವ ಹೋಟೆಲ್ನ ಬದಿಯಲ್ಲಿ ಎಸೆದು ಹೋಗಿದ್ದಾರೆ. ತಿಂಗಳಾಡಿ ಪರಿಸರದಲ್ಲಿ ಇತ್ತೀಚೆಗೆ ಪುಡಿಗಳ್ಳರ ಹಾವಳಿ ಹೆಚ್ಚಾಗಿದ್ದು ಇತ್ತೀಚೆಗಷ್ಟೇ ಸ್ಥಳೀಯ ಅಡಿಕೆ ಅಂಗಡಿಯಲ್ಲಿ ಅಡಿಕೆ ಕಳ್ಳತನ ನಡೆದಿತ್ತು.