- ಅವೈಜ್ಞಾನಿಕ ನಾಗನಕಟ್ಟೆ ಕಾಮಗಾರಿ ಸ್ಥಗಿತಗೊಳಿಸಬೇಕು- ಮೋಹನದಾಸ ಸ್ವಾಮೀಜಿ
ಪುತ್ತೂರು: ಮುಂಡೂರು ಶ್ರೀ ಮೃತ್ಯುಂಜೇಶ್ವರ ದೇವಸ್ಥಾನಕ್ಕೆ ಮಾಣಿಲ ಶ್ರೀಧಾಮದ ಶ್ರೀ ಮೋಹನ ದಾಸ ಸ್ವಾಮೀಜಿ ಮೇ.31 ರಂದು ಭೇಟಿ ನೀಡಿದರು.
ದೇವಸ್ಥಾನದಲ್ಲಿ ನಾಗನ ಕಟ್ಟೆಯನ್ನು ಅವೈಜ್ಞಾನಿಕವಾಗಿ ಕಟ್ಟಲಾಗುತ್ತಿದೆ ಎಂದು ಆರೋಪಿಸಿ ಸಾರ್ವಜನಿಕರು ಮೇ.30 ರಂದು ಪ್ರತಿಭಟನಾ ಸಭೆ ನಡೆಸಿದ್ದರು. ಈ ಹಿನ್ನೆಲೆ ಭೇಟಿ ನೀಡಿದ ಶ್ರೀಗಳು ನಾಗನಕಟ್ಟೆ ಕಾಮಗಾರಿಯನ್ನು ಮುಂದುವರಿಸಬಾರದು, ಈ ಕಟ್ಟೆಯಲ್ಲಿ ನಾಗ ಪ್ರತಿಷ್ಠೆಯನ್ನು ಮಾಡಬಾರದು, ಮುಂದುವರೆದರೆ ಸಮಸ್ಯೆ ಎದುರಾಗಲಿದ್ದು ಈಗ ನಡೆಯುತ್ತಿರುವ ಕಾಮಗಾರಿಯನ್ನು ಕೂಡಲೇ ನಿಲ್ಲಿಸಬೇಕು ಎಂದು ಅವರು ಹೇಳಿದರು.
ಒಂದು ದಿನದ ತಾಂಬೂಲ ಪ್ರಶ್ನೆ ನಡೆಸಿ ಕೆಲಸವನ್ನು ಮುಂದುವರೆಸಿ ಎಂದು ಹೇಳಿದ ಮೋಹನದಾಸ ಸ್ವಾಮೀಜಿ ಸಲಹೆ ನೀಡಿದರು. ಅದಾಗ್ಯೂ ಕಾರ್ಯ ಚಟುವಟಿಕೆ ಮುಂದುವರಿಸಿದರೆ ಮುಂದಕ್ಕೆ ಸೂತಕದ ಜೊತೆಗೆ ಸಾವು-ನೋವು ಕೂಡಾ ಸಂಭವಿಸುವ ಸಾಧ್ಯತೆ ಇದೆ ಎಂದು ಸ್ವಾಮೀಜಿ ಎಚ್ಚರಿಕೆ ನೀಡಿದರು.
ಈ ವೇಳೆ ಮುಂಡೂರು ಗ್ರಾಪಂ ಅಧ್ಯಕ್ಷೆ ಪಂಚಾಯತ್ ಅಧ್ಯಕ್ಷರಾದ ಪುಷ್ಪಾ ಎನ್, ಮೃತ್ಯುಂಜೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಮಾಜಿ ಅಧ್ಯಕ್ಷರಾದ ಅರುಣ್ ಕುಮಾರ್ ಪುತ್ತಿಲ, ಸುಂದರ ಗೌಡ, ಮಹೇಶ್ಚಂದ್ರ ಸಾಲ್ಯಾನ್, ಪುರಂದರ ಗೌಡ ಉಪಸ್ಥಿತರಿದ್ದರು.