ಮರ್ದಾಳ: ಬಾವಿಗೆ ಬಿದ್ದ ದನ-ಸ್ಥಳೀಯರ ಸಹಾಯದಿಂದ ರಕ್ಷಣೆ

0

ಕಡಬ: ಬಾವಿಗೆ ಬಿದ್ದ ದನವನ್ನು ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳೀಯರ ಸಹಕಾರದಲ್ಲಿ ಮೇಲಕ್ಕೆತ್ತಿ ಬದುಕಿಸಿದ ಘಟನೆ ಕಡಬ ಸಮೀಪದ ಮರ್ದಾಳ ಎಂಬಲ್ಲಿ  ಜೂ.3ರಂದು  ನಡೆದಿದೆ.

 

ಮರ್ದಾಳ ಶಿವಾಜಿನಗರ ನಿವಾಸಿ ಹೈದರ್ ಕೊಹಿನೂರ್ ಎಂಬವರ ಮನೆ ಸಮೀಪದ ಬಾವಿಗೆ ಖತೀಜಮ್ಮ ಎಂಬವರ ದನ ಬಿದ್ದಿದ್ದು, ವಿಷಯ ತಿಳಿದ ಸ್ಥಳೀಯರು ದನವನ್ನು ಮೇಲೆತ್ತಲು ಪ್ರಯತ್ನಿಸಿ ವಿಫಲರಾಗಿದ್ದಾರೆ. ತಕ್ಷಣವೇ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಲಾಗಿದ್ದು, ಪುತ್ತೂರಿನಿಂದ ಅಗ್ನಿಶಾಮಕ ದಳದ ಸಿಬ್ಬಂದಿ ಆಗಮಿಸಿ ಸ್ಥಳೀಯರ ಸಹಕಾರದಿಂದ ಮೇಲಕ್ಕೆತ್ತಿದ್ದಾರೆ‌.

LEAVE A REPLY

Please enter your comment!
Please enter your name here