ವೀರಮಂಗಲ ಶಾಲೆಯಲ್ಲಿ ವಿಶ್ವ ಪರಿಸರ ದಿನಾಚರಣೆ 

0

ನರಿಮೊಗರು : ವೀರಮಂಗಲ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿಶ್ವ ಪರಿಸರ ದಿನಾಚರಣೆಯನ್ನು ಆಚರಿಸಲಾಯಿತು. 
ಕಾರ್ಯಕ್ರಮವನ್ನು ನಿವೃತ್ತ ಮುಖ್ಯ ಗುರು ಮೋನಪ್ಪ ಗೌಡ ವೀರಮಂಗಲ ಅವರು ಗಿಡಗಳಿಗೆ ನೀರು ಹಾಕುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಪರಿಸರ ಮತ್ತು ಬದುಕಿನ ಕುರಿತು ಮಾತನಾಡಿ ಆರೋಗ್ಯಕರವಾದ ಪರಿಸರದ ನಿರ್ಮಾಣದ ಪಣ ವಿದ್ಯಾರ್ಥಿ ದೆಸೆಯಿಂದಲೇ  ಅಗತ್ಯವಿದೆ. ಮರಗಿಡಗಳನ್ನು ಬೆಳೆಸಿ ಪೋಷಿಸುವುದು ನಮ್ಮೆಲ್ಲರ ಕರ್ತವ್ಯ ಎಂದರು. ಮುಖ್ಯ ಅತಿಥಿ ವಕೀಲ ಮಹೇಶ್ ಕೆ ಸವಣೂರು ಮಾತನಾಡಿ,  ವಿಶ್ವದ್ಯಾಂತ ಇಂದು ಪರಿಸರ ಉಳಿಸುವ ಜಾಗೃತಿಯಾಗುತ್ತಿದೆ. ಅನಿಯಮಿತವಾಗಿ ಆಕ್ರಮಣ ಮಾಡಿದ ಕಾರಣ ಇಂದು ಅತಿವೃಷ್ಡಿ ಅನಾವೃಷ್ಠಿ,ಆಕಾಲಿಕ ಮಳೆ ,ಉರಿಬಿಸಿಲು ಆಗುತ್ತಿದೆ. ಪ್ರಕೃತಿಯ ಈ ಅಸಮತೋಲನಕ್ಕೆ ನಾವು ಕಾರಣರಾಗದಂತೆ ಎಚ್ಚರ ವಹಿಸಬೇಕು, ಪರಿಸರ ಸೌಂದರ್ಯತೆಯನ್ನು ಕಾಪಾಡಿಕೊಳ್ಳೋಣ ಎಂದರು.  
ಪೋಷಕರು ವಿದ್ಯಾರ್ಥಿಗಳು ವಿವಿಧ ಗಿಡಗಳನ್ನು ನೆಟ್ಟು ಸಂಭ್ರಮಿಸಿದರು ಹೊಸ ವಿದ್ಯಾರ್ಥಿಗಳು ಶಾಲೆಗೊಂದು ಹೂವಿನ ಕುಂಡ  ನೀಡಿ ಸಹಕರಿಸಿದರು. ಶಾಲಾಭಿವೃದ್ಧಿ ಸಮಿತಿಯ ಉಪಾಧ್ಯಕ್ಷ ರಝಾಕ್ ಅಧ್ಯಕ್ಷತೆ ವಹಿಸಿದ್ದರು.ಶಾಲೆಯ 60 ನೇ ವರ್ಷಾಚರಣೆಯ  ಅಧ್ಯಕ್ಷರಾದ ವೀರಮಂಗಲ ಗೋಪಾಲಕೃಷ್ಣ, ನರಿಮೊಗರು ಗ್ರಾಮ ಪಂಚಾಯತ್ ಸದಸ್ಯೆ ಪದ್ಮಾವತಿ, ಶಾಲಾಭಿವೃದ್ಧಿ ಸಮಿತಿಯ ನಿಕಟ ಪೂರ್ವಾಧ್ಯಕ್ಷ ದಿನೇಶ್ ಶೆಟ್ಟಿ ಉಪಸ್ಥಿತರಿದ್ದರು.
 ಹಿರಿಯ ಶಿಕ್ಷಕಿ ಹರಿಣಾಕ್ಷಿ ಸ್ವಾಗತಿಸಿ, ಶಾಲಾ ಮುಖ್ಯಗುರು ತಾರಾನಾಥ ಸವಣೂರು ಪ್ರಾಸ್ತಾವಿಕ ಮಾತುಗಳನ್ನಾಡಿದರು.  ಶಿಕ್ಷಕಿ ಶೋಭಾ ವಂದಿಸಿ, ಶಾಲಾನಾಯಕಿ  ದೀಕ್ಷಾ ಕಾರ್ಯಕ್ರಮ ನಿರ್ವಹಿಸಿದರು. ಕು.ಹಂಸಿನಿ,ಭವಿಷ್ಯ,ಕೃತಿಕಾ ಪರಿಸರ ಗೀತೆ ಹಾಡಿದರು. 
ಶಿಕ್ಷಕರಾದ  ಹೇಮಾ,ಶ್ರೀಲತಾ,ಕವಿತಾ,ಗಾಯತ್ರಿ ವಿವಿಧ ಕಾರ್ಯಕ್ರಮ ನಿರ್ವಹಿಸಿದರು. 
ಪೋಷಕರ ಸಭೆಯಲ್ಲಿ ಶಾಲೆಯ ಸೌಂದರ್ಯೀಕರಣಕ್ಕೆ ಹಾಗೂ ಅಡುಗೆ ಕೋಣೆಯ ಶೀಟು ಅಳವಡಿಕೆಗೆ 50000 ವೆಚ್ಚದ ಆಯವ್ಯಯ ಮಾಡಿ ಶಾಲಾಭಿವೃದ್ದಿ ಸಮಿತಿಗೆ ದೇಣಿಗೆ ನೀಡಿದರು.

LEAVE A REPLY

Please enter your comment!
Please enter your name here