ಪುತ್ತೂರು:ನಗರೋತ್ಥಾನದ ಮೂರನೇ ಹಂತದ ಯೋಜನೆಯ ಉಳಿಕೆ ರೂ.15ಲಕ್ಷ ಅನುದಾನದಲ್ಲಿ ನಗರ ಸಭಾ ವ್ಯಾಪ್ತಿಯ ಕುಕ್ಕಾಡಿ-ಬಾರಿಕೆ ರಸ್ತೆ ಕಾಂಕ್ರೀಟಿಕರಣಕ್ಕೆ ಜೂ.೪ರಂದು ಶಿಲಾನ್ಯಾಸ ನೆರವೇರಿತು.
ಶಾಸಕ ಸಂಜೀವ ಮಠಂದೂರು ಶಿಲಾನ್ಯಾಸ ನೆರವೇರಿಸಿದರು. ನಗರ ಸಭಾ ಅಧ್ಯಕ್ಷ ಜೀವಂಧರ್ ಜೈನ್, ಉಪಾಧ್ಯಕ್ಷೆ ವಿದ್ಯಾಗೌರಿ, ಸದಸ್ಯರಾದ ಶೀನಪ್ಪ ನಾಯ್ಕ, ಗೌರಿ ಬನ್ನೂರು, ಇಂದಿರಾ ಆಚಾರ್ಯ, ಶಶಿಕಲಾ ಸಿ.ಎಸ್., ಪೂಡಾದ ಅಧ್ಯಕ್ಷ ಭಾಮಿ ಅಶೋಕ್ ಶೆಣೈ, ಪೌರಾಯುಕ್ತ ಮಧು ಎಸ್ ಮನೋಹರ್, ಇಂಜಿನಿಯರ್ ಅರುಣ್, ತಾ.ಪಂ ಮಾಜಿ ಅಧ್ಯಕ್ಷ ರಾಧಾಕೃಷ್ಣ ಬೋರ್ಕರ್, ಬಿಜೆಪಿ ಗ್ರಾಮಾಂತರ ಮಂಡಲದ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ, ನಗರ ಸಭಾ ೩೦ನೇ ವಾರ್ಡ್ನ ಬಿಜೆಪಿ ಬೂತ್ ಸಮಿತಿ ಅಧ್ಯಕ್ಷ ಉಮೇಶ್ ಆಚಾರ್ಯ ಕುಕ್ಕಾಡಿ, ಕಾರ್ಯದರ್ಶಿ ಮೋಹನ್, ಮುರಳಿ ಆಚಾರ್ಯ, ಗುತ್ತಿಗೆದಾರ ಹಂಝ, ನಾರಾಯಣ ನಾಯಕ್ ಪಂಜಳ ಸೇರಿದಂತೆ ಹಲವು ಮಂದಿ ಉಪಸ್ಥಿತರಿದ್ದರು.