ಪುತ್ತೂರು: ಕೆಮ್ಮಿಂಜೆಯ ಆತ್ಮಾಳ ಶ್ರೀಮಲ್ಲಿಕಾರ್ಜುನ ದೇವಸ್ಥಾನದ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಜೂ.11 ರಿಂದ 13ರ ತನಕ ವಿವಿಧ ತಾಂತ್ರಿಕ, ಧಾರ್ಮಿಕ, ಕಾರ್ಯಕ್ರಮಗಳೊಂದಿಗೆ ನಡೆಯಲಿದ್ದು ಇದರ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಲಾಯಿತು.
ಆತ್ತಾಳ ಶ್ರೀಮಲ್ಲಿಕಾರ್ಜುನ ದೇವಸ್ಥಾನ ಆಡಳಿತ ಸಮಿತಿಯ ಅಧ್ಯಕ್ಷ ಉದ್ಯಮಿ ಕೆ. ನಾಗೇಶ್ ರಾವ್ ಬೆಂಗಳೂರು, ವಿಶ್ವ ರಾಮಕ್ಷತ್ರಿಯ ಮಹಾ ಸಂಘದ ಉಪಾಧ್ಯಕ್ಷ ಶಿವರಾಮ ಕಾಸರಗೋಡುರವರಿಗೆ ಆಮಂತ್ರಣ ನೀಡುವ ಮೂಲಕ ಬಿಡುಗಡೆ ಗೊಳಿಸಿದರು. ಶಶಿಧರ ಅತ್ತಾಳ, ಸುರೇಶ್ ಕುಮಾರ್ ಕೆಮ್ಮಿಂಜೆ, ದಯಾನಂದ ಅತ್ತಾಳ, ನವೀನ್ಚಂದ್ರ, ಶ್ರೀನಿವಾಸ ಪುತ್ತೂರು, ವಿಜಯಲಕ್ಷ್ಮೀ, ಶಶಿಧರ ಆತ್ತಾಳ ಉಪಸ್ಥಿತರಿದ್ದರು.