ನಿಡ್ಪಳ್ಳಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್ ಪುತ್ತೂರು ಬೆಟ್ಟಂಪಾಡಿ ವಲಯದ ಗುಮ್ಮಟೆಗದ್ದೆ ಒಕ್ಕೂಟದಲ್ಲಿ ತತ್ವಮಸಿ ಹೆಸರಿನ ನೂತನ ಪ್ರಗತಿಬಂಧು ತಂಡವನ್ನು ಜೂ.6 ರಂದು ಗುಮ್ಮಟೆಗದ್ದೆ ಶ್ರೀಕೃಷ್ಣ ಭಜನಾ ಮಂದಿರದಲ್ಲಿ ಉದ್ಘಾಟಿಸಲಾಯಿತು.
ಒಕ್ಕೂಟದ ಅಧ್ಯಕ್ಷ ಹರೀಶ್ ಗೌಡ ದೀಪ ಬೆಳಗಿಸಿ ಉದ್ಘಾಟಿಸಿ ಶುಭ ಹಾರೈಸಿದರು. ವಲಯ ಮೆಲ್ವೀಚಾರಕ ಶಿವಪ್ಪ ಎಂ.ಕೆ ಯೋಜನೆಯ ನಿಯಮಗಳ ಬಗ್ಗೆ ಮಾಹಿತಿ ನೀಡಿ ಶುಭ ಹಾರೈಸಿದರು. ನಂತರ ತಂಡಕ್ಕೆ ದಾಖಲಾತಿ ಪುಸ್ತಕ ಹಸ್ತಾಂತರಿಸಲಾಯಿತು. ತಂಡದ ಪ್ರಬಂಧಕರಾದ ಚಂದ್ರ.ಎ, ಸಂಯೋಜಕರಾದ ಮಂಜುನಾಥ ರೈ.ಬಿ, ಕೋಶಾಧಿಕಾರಿ ನಾಗೇಶ್, ಸದಸ್ಯರಾದ ಹರೀಶ್ ಪಾಟಾಳಿ, ಗೌತಮ್, ಗಿರೀಶ, ಸೇವಾ ಪ್ರತಿನಿಧಿಗಳಾದ ಜಯಶ್ರೀ.ಡಿ, ಭಾರತಿ ಉಪ್ಪಳಿಗೆ ಉಪಸ್ಥಿತರಿದ್ದರು.