ಭಡ್ತಿಗೊಂಡು ವರ್ಗಾವಣೆಗೊಂಡ ಶಿಕ್ಷಕ ರಮೇಶ್ ಅವರಿಗೆ ಬೀಳ್ಕೋಡುಗೆ

0

ನೂಜಿಬಾಳ್ತಿಲ: ನೂಜಿಬಾಳ್ತಿಲ ಗ್ರಾಮದ ಬೇರಿಕೆ ಸ.ಕಿ.ಪ್ರಾ. ಶಾಲೆಯಲ್ಲಿ ಸುಧೀರ್ಘ 20 ವರ್ಷ ಸೇವೆ ಸಲ್ಲಿಸಿ ಮುಖ್ಯ ಶಿಕ್ಷಕರಾಗಿ ಭಡ್ತಿಗೊಂಡು ವರ್ಗಾವಣೆಗೊಂಡ ಶಿಕ್ಷಕ‌ ರಮೇಶ್ ಎಸ್. ಅವರಿಗೆ ಬೀಳ್ಕೊಡುಗೆ ಹಾಗೂ ಸನ್ಮಾನ ಕಾರ್ಯಕ್ರಮ ಬೇರಿಕೆ ಶಾಲೆಯಲ್ಲಿ ನಡೆಯಿತು.

 


ಶಾಲಾ ಎಸ್ಡಿಎಂಸಿ ಅಧ್ಯಕ್ಷ ರಾಮಚಂದ್ರ ಅಧ್ಯಕ್ಷತೆ ವಹಿಸಿದ್ದರು. ಜಿ.ಪಂ. ಮಾಜಿ ಸದಸ್ಯ ಪಿ.ಪಿ.ವರ್ಗೀಸ್, ಗ್ರಾ.ಪಂ. ಸದಸ್ಯರಾದ ಪಿ.ಜೆ.ಜೋಸೆಫ್, ಮೀನಾಕ್ಷಿ, ವಸಂತ ಕುಬಲಾಡಿ, ಮಾಜಿ ಸದಸ್ಯ ಪಿ.ಯು.ಸ್ಕರಿಯ, ಸಿಆರ್ಪಿ ಗೋವಿಂದ ನಾಯಕ್, ಎಸ್ಡಿಎಂಸಿ ಉಪಾಧ್ಯಕ್ಷೆ ಸುರೇಖಾ, ಕುರಿಯಾಲಕೊಪ್ಪ ಶ್ರೀ ಲಕ್ಷ್ಮೀ ಜನಾರ್ದನ ದೇವಸ್ಥಾನದ ಆಡಳಿ ಮಂಡಳಿ ಅಧ್ಯಕ್ಷ ಪೂವಪ್ಪ ಕುಂಬಾರ, ಎಸ್ಡಿಎಂಸಿ ಸದಸ್ಯರು, ಶಾಲಾ ಪೋಷಕರು, ಹಿರಿಯ ವಿದ್ಯಾರ್ಥಿಗಳು, ಶಾಲಾ ವಿದ್ಯಾರ್ಥಿಗಳು, ಅಂಗನವಾಡಿ ಕಾರ್ಯಕರ್ತೆ ಎಲಿಯಮ್ಮ, ಸನ್ಮನಿತರ ಪುತ್ರ ಮದನ್ ಉಪಸ್ಥಿತರಿದ್ದರು. ಸೌಮ್ಯ, ಕಾವ್ಯಶ್ರೀ, ಧನ್ಯಶ್ರೀ, ಹರ್ಷಿತಾ ಪ್ರಾರ್ಥಿಸಿದರು. ಎಲಿಯಮ್ಮ ಸ್ವಾಗತಿಸಿದರು. ಅಮೃತವಾಣಿ ವಂದಿಸಿದರು. ಶಿಕ್ಷಕ ಗಣೇಶ್ ನಡುವಾಲು ಕಾರ್ಯಕ್ರಮ ನಿರೂಪಿಸಿದರು. ವರ್ಗಾವಣೆ ಗೊಂಡ ಶಿಕ್ಷಕ ರಮೇಶ್ ಅವರನ್ನು ಪತ್ನಿ ಅನಿತಾ, ಜತೆಯಲ್ಲಿ ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಎಸ್ಎಸ್ಎಲ್ಸಿ ಯಲ್ಲಿ ಹೆಚ್ಚು ಅಂಕ ಪಡೆದ ಸೌಮ್ಯ, ಆಶಾ, ಉಷಾ ಅವರನ್ನು ಸನ್ಮಾನಿಸಲಾಯಿತು. ಸನ್ಮಾನ ಸ್ವೀಕರಿಸಿದ ರಮೇಶ್ ಅವರು ಕೃತಜ್ಞತೆ ಸಲ್ಲಿಸಿದರು

LEAVE A REPLY

Please enter your comment!
Please enter your name here