ಪುತ್ತೂರು: ಬೆಂಗಳೂರಿನ ನೃತ್ಯ ಕಲಾವಿದೆ ಪದ್ಮಿನಿ ಉಪಾಧ್ಯಾಯರಿಂದ ಇತ್ತೀಚೆಗೆ ಶ್ರೀ ಮೂಕಾಂಬಿಕಾ ಕಲ್ಚರಲ್ ಅಕಾಡೆಮಿಯವರ ದರ್ಬೆಯಲ್ಲಿನ ಶಶಿಶಂಕರ ಸಭಾಂಗಣದಲ್ಲಿ ನಡೆದ ನೃತ್ಯಾಂತರಂಗದ 66ನೇ ಸರಣಿಯಲ್ಲಿ ಭರತನಾಟ್ಯ ಕಾರ್ಯಕ್ರಮ ನಡೆಯಿತು.
ಅಭ್ಯಾಗತರಾಗಿ ಬರಹಗಾರ ಶಂಕರಿ ಶರ್ಮರವರು ಕಾರ್ಯಕ್ರಮದ ವೈಖರಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ವಿದ್ವಾನ್ ದೀಪಕ್ ಕುಮಾರ್ ಕಾರ್ಯಕ್ರಮ ಸಂಯೋಜಿಸಿದರು.