ಧಾರವಾಡ ಕೃಷಿ ವಿಶ್ವವಿದ್ಯಾನಿಲಯದ ಎಂ.ಎಸ್ಸಿ ವಿದ್ಯಾರ್ಥಿನಿ, ಕೋಡಿಂಬಾಡಿಯ ವಂದನಾ ಸಾಮಂತ್ ಗೆ ಚಿನ್ನದ ಪದಕ

0

ಪುತ್ತೂರು: ಧಾರವಾಡ ಕೃಷಿ ವಿಶ್ವವಿದ್ಯಾನಿಲಯದ ಸಸ್ಯ ಜೈವಿಕ ರಾಸಾಯನ ವಿಭಾಗದ ವಿದ್ಯಾರ್ಥಿನಿ ಕು.ವಂದನಾ ಸಾಮಂತ್ ಚಿನ್ನದ ಪದಕ ಪಡೆದಿದ್ದಾರೆ.

.

ಧಾರವಾಡದ ಕರ್ನಾಟಕ ವಿಶ್ವವಿದ್ಯಾನಿಲಯದ 35ನೇ ಘಟಿಕೋತ್ಸವದಲ್ಲಿ ವಂದನಾರವರಿಗೆ ರಾಜ್ಯಪಾಲ ತಾವರ್ ಚಂದ್ ಗೆಹ್ಲೋಟ್ ಅವರು ಚಿನ್ನದ ಪದಕ ಪ್ರದಾನ ಮಾಡಿ ಗೌರವಿಸಿದರು.


ಕೋಡಿಂಬಾಡಿ ಗ್ರಾಮದ ನೆಕ್ಕರಾಜೆ ನಿವಾಸಿಗಳಾದ ಕೃಷಿಕ ರಮೇಶ್ ಸಾಮಂತ್ ಮತ್ತು ಮಠಂತಬೆಟ್ಟು ಶ್ರೀ ಮಹಿಷಮರ್ದಿನಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಮಾಜಿ ಸದಸ್ಯೆ ರಾಧಿಕಾ ಆರ್. ಸಾಮಂತ್ ಅವರ ಪುತ್ರಿಯಾದ ವಂದನಾರವರು ಕೋಡಿಂಬಾಡಿ ಹಿ.ಪ್ರಾ.ಶಾಲೆ, ತೆಂಕಿಲ ವಿವೇಕಾನಂದ ಮತ್ತು ನೆಹರೂನಗರ ವಿವೇಕಾನಂದ ವಿದ್ಯಾಸಂಸ್ಥೆಯಲ್ಲಿ ವಿದ್ಯಾಭ್ಯಾಸ ಪೂರೈಸಿದ ಬಳಿಕ ಹಾಸನ ವಿಶ್ವ ವಿದ್ಯಾನಿಲಯದ ಸಸ್ಯ ಜೈವಿಕ ರಾಸಾಯನ ವಿಭಾಗದಲ್ಲಿ ಬಿ.ಎಸ್ಸಿ ಮಾಡಿದ್ದರು. ನಂತರ ಧಾರವಾಡದ ಕರ್ನಾಟಕ ವಿಶ್ವವಿದ್ಯಾನಿಲಯದಲ್ಲಿ ಎಂ.ಎಸ್ಸಿ ಮಾಡಿದ್ದಾರೆ.

LEAVE A REPLY

Please enter your comment!
Please enter your name here