ಮೋಹನ್ ಚಂದ್ರರವರಿಗೆ ‘ಜೇಸಿ ಅತ್ಯುತ್ತಮ ಘಟಕಾಧ್ಯಕ್ಷ ಪ್ರಶಸ್ತಿ’, ಉಪ್ಪಿನಂಗಡಿ ಘಟಕ ಕ್ಕೆ ‘ಡೈಮಂಡ್ ಘಟಕ ಪ್ರಶಸ್ತಿ’

0

ಪುತ್ತೂರು: ಜೇಸಿಐ ವಲಯ 15ರ ಮಧ್ಯಂತರ ಸಮ್ಮೇಳನ ‘ರಂಗೋಲಿ’ ಜೆಸಿಐ ಮಡಂತ್ಯಾರ್ ಘಟಕದ ನೇತೃತ್ವದಲ್ಲಿ ನಡೆಯಿತು. ಈ ಸಮ್ಮೇಳನದಲ್ಲಿ ಜೆಸಿಐಯ ಗುರಿ, ಉದ್ದೇಶಗಳನ್ನು ಈಡೇರಿಸಲು ಶ್ರಮಿಸಿದ ಘಟಕಗಳಿಗೆ ವಿವಿಧ ರೀತಿಯ ಮನ್ನಣೆ ಪುರಸ್ಕಾರ ನೀಡಿ ಗೌರವಿಸಲಾಗಿದ್ದು ಉಪ್ಪಿನಂಗಡಿ ಘಟಕ ಅನೇಕ ಪುರಸ್ಕಾರಗಳನ್ನು ಪಡೆದುಕೊಂಡಿತು.


ವಲಯಾಧ್ಯಕ್ಷ ರೋಯನ್ ಉದಯ್ ಕ್ರಾಸ್ತ, ವಲಯ ಉಪಾಧ್ಯಕ್ಷ ದೀಪಕ್ ಗಂಗೂಲಿ ಮತ್ತು ವಲಯ ಆಡಳಿತ ಮಂಡಳಿಯ ಪುರುಷೋತ್ತಮ ಶೆಟ್ಟಿಯವರ ಉಪಸ್ಥಿತಿಯಲ್ಲಿ ಪ್ರಶಸ್ತಿ ಪ್ರದಾನ ನಡೆಯಿತು. ಜೆಸಿಐ ಉಪ್ಪಿನಂಗಡಿ ಘಟಕಾಧ್ಯಕ್ಷ ಮೋಹನ್ ಚಂದ್ರ ತೋಟದಮನೆರವರು ‘ಡಿ’ ಪ್ರಾಂತ್ಯದ ‘ಅತ್ಯುತ್ತಮ ಘಟಕಾಧ್ಯಕ್ಷ ಪ್ರಶಸ್ತಿ’ ಪುರಸ್ಕೃತರಾದಲ್ಲದೆ ಉಪ್ಪಿನಂಗಡಿ ಘಟಕಕ್ಕೆ ಡೈಮಂಡ್ ಘಟಕ ಪುರಸ್ಕಾರ, ಅಕ್ಷಯ ರತ್ನ ಪುರಸ್ಕಾರ, ಸೆಲ್ಯೂಟ್ ಟೂ ಸೈಲೆಂಟ್ ವರ್ಕರ್ ಕಾರ್ಯಕ್ರಮ ಪುರಸ್ಕಾರ, ಸ್ಪರ್ಕ್ಲಿಂಗ್ ಅಂಬಾಸಿಡರ್ ಪುರಸ್ಕಾರ, ಮಿನುಗುತಾರೆ ಪುರಸ್ಕಾರ, ರಕ್ತದಾನ ಪುರಸ್ಕಾರ, ಬಿಸಿನೆಸ್ ಏರಿಯಾ ಪುರಸ್ಕಾರ, ಸಿಎಪಿಪಿ ಪ್ರಶಸ್ತಿ, ನ್ಯಾಷನಲ್ ಟ್ರೈನಿಂಗ್ ಡೇ ಪುರಸ್ಕಾರ , ವಿವಿಧ ರೀತಿಯ ಕಾರ್ಯಕ್ರಮಗಳನ್ನು ಸಂಘಟಿಸಿದಕ್ಕೆ ‘ಪಂಚರತ್ನ ಪ್ರಶಸ್ತಿ’ , ಕಮ್ಯುನಿಟಿ ಡೆವಲಪ್ಮೆಂಟ್ ಪುರಸ್ಕಾರ ಲಭಿಸಿತು.

ಘಟಕ ವೈಭವ ಸ್ಪರ್ಧೆಯಲ್ಲಿ ಉಪಾಧ್ಯಕ್ಷ ಕುಶಾಲಪ್ಪ ನೇತೃತ್ವದ ತಂಡ ದ್ವಿತೀಯ ಪ್ರಶಸ್ತಿಗೆ ಭಾಜನವಾಯಿತು. ಘಟಕದ ಫೋಟೋ ಡಿಸ್ಪ್ಲೇ ಮತ್ತು ಬ್ಯಾನರ್ ರಚನೆ ಮೆಚ್ಚುಗೆಗೆ ಪಾತ್ರವಾಯಿತು. ವಲಯದ ಮಧ್ಯಂತರ ಸಮ್ಮೇಳನದಲ್ಲಿ ಉಪ್ಪಿನಂಗಡಿ ಘಟಕದಿಂದ ಅಧ್ಯಕ್ಷ ಮೋಹನ್ ಚಂದ್ರ ತೋಟದ ಮನೆ, ಕೆ. ವಿ. ಕುಲಾಲ್,ಪ್ರಶಾಂತ್ ಕುಮಾರ್ ರೈ, ಶಶಿಧರ್ ನೆಕ್ಕಿಲಾಡಿ, ಲವಿನಾ ಪಿಂಟೊ, ಉಮೇಶ್ ಆಚಾರ್ಯ, ಹರೀಶ್ ನಟ್ಟಿಬೈಲು, ಮಹೇಶ್ ಖಂಡಿಗ, ದಿವಾಕರ ಶಾಂತಿನಗರ,ಪುರುಷೋತ್ತಮ ತೋಟದ ಮನೆ, ಪುನೀತ್ ಮಂಜಿಪಲ್ಲ, ಸುರೇಶ್,ಕುಶಾಲಪ್ಪ , ಮಹೇಶ್ ಖಂಡಿಗ, ಅರ್ಚನಾ, ಪ್ರಣಮ್ಯ , ಕೃತಿಕಾ, ಕಿರಣ್ ಮುರಳಿ, ಅರುಣ್ ಮುರಳಿ , ಅನಿಶ್, ಮಹೇಶ್, ಪ್ರಣೇಶ್, ಶ್ರವಣ್ , ವರುಣ್, ಪ್ರಜ್ವಲ್, ಮೋಹನ್ , ನವ್ಯ, ಯಶು, ಮೇಘ ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here