ಪುತ್ತೂರು:ದರ್ಬೆ ಬೈಪಾಸ್ನಲ್ಲಿ ನಂದಿನಿ ಡೀಲರ್ ಆಗಿದ್ದ, ಮುಕ್ರಂಪಾಡಿ ಶ್ರೀಗಣೇಶ್ ನಿಲಯದ ದಿನೇಶ್ ಕುಮಾರ್ ಬಲ್ಲಾಳ್(57ವ.)ರವರು ಅಸೌಖ್ಯದಿಂದಾಗಿ ಜೂ.8ರಂದು ಪುತ್ತೂರು ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.
ಮೃತರು ತಂದೆ ಕೃಷ್ಣಯ್ಯ ಬಲ್ಲಾಳ್, ತಾಯಿ ಲಕ್ಷ್ಮೀ ಬಲ್ಲಾಳ್, ಪತ್ನಿ ರಾಜೇಶ್ವರಿ ಬಲ್ಲಾಳ್, ಪುತ್ರಿ ಶ್ರಾವ್ಯ, ಪುತ್ರ ಶ್ರವಣ್, ಸಹೋದರರಾದ ಸುರೇಂದ್ರ ಬಲ್ಲಾಳ್, ಪುತ್ತೂರು ಕೋ ಒಪರೇಟಿವ್ ಟೌನ್ ಬ್ಯಾಂಕ್ ಸಿಬ್ಬಂದಿ ಉದಯ ಕುಮಾರ್ ಬಲ್ಲಾಳ್, ಸಹೋದರಿ ಪುತ್ತೂರು ಸರಕಾರಿ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ.ಆಶಾ ಪುತ್ತೂರಾಯರವರನ್ನು ಅಗಲಿದ್ದಾರೆ.