ಪುತ್ತೂರು: ಮುಖ್ಯ ರಸ್ತೆ ಅರುಣಾ ಟಾಕೀಸ್ ಬಳಿಯಿರುವ ಶ್ರೀಕಾಂತ್ ಬಿಲ್ಡಿಂಗ್ನ ಮುಂಭಾಗದಲ್ಲಿ ರೋಶನ್ ರೈ ಬನ್ನೂರು ಹಾಗೂ ಗಿರಿಧರ್ ಹೆಗ್ಡೆ ಕೊಂಬೆಟ್ಟು ಇವರ ಪಾಲುದಾರಿಕೆಯಲ್ಲಿ ನಿರ್ಮಾಣಗೊಂಡಿರುವ ಶಿವ ಆರ್ಕೇಡ್ ಜೂನ್ 10 ರಂದು ಬೆಳಿಗ್ಗೆ 9.30 ರಂದು ಧಾರ್ಮಿಕ ಕಾರ್ಯಕ್ರಮದೊಂದಿಗೆ ಶುಭಾರಂಭಗೊಳ್ಳಲಿದೆ.
ಮಾಜಿ ಸಚಿವ ಬಿ ರಮಾನಾಥ ರೈ ಬೆಳ್ಳಿಪ್ಪಾಡಿ ದೀಪ ಪ್ರಜ್ವಲನೆ ಮಾಡಿ ನೂತನ ಸಂಕೀರ್ಣ ದ ಶ್ರೇಯೋಭಿವೃದ್ಧಿಗೆ ಶುಭಹಾರೈಸಲಿರುವರು. ಮುಖ್ಯ ಅತಿಥಿಗಳಾಗಿ ಪುತ್ತೂರಿನ ಮಾಜಿ ಶಾಸಕಿ ಶಕುಂತಳಾ ಟಿ ಶೆಟ್ಟಿ, ನಗರಸಭಾ ಅಧ್ಯಕ್ಷ ಜೀವಂಧರ್ ಜೈನ್, ನಗರಸಭೆಯ ಮಾಜಿ ವಿಪಕ್ಷ ನಾಯಕ ಎಚ್ ಮಹಮ್ಮದ್ ಆಲಿ, ನಗರಸಭಾ ಸದಸ್ಯ ರಿಯಾಝ್ ಪರ್ಲಡ್ಕ ಭಾಗವಹಿಸಲಿರುವರೆಂದು ಸಂಸ್ಥೆಯ ಪಾಲುದಾರ ರೋಶನ್ ರೈ ಬನ್ನೂರು ತಿಳಿಸಿದ್ದಾರೆ.