ಪುತ್ತೂರು: ಮೇನಾಲ ಮಧುರಾ ಇಂಟರ್ ನ್ಯಾಷನಲ್ ಸ್ಕೂಲ್ನಲ್ಲಿ ಶಿಕ್ಷಕರಿಗೆ ತರಬೇತಿ ಕಾರ್ಯಾಗಾರ ನಡೆಯಿತು. ಸಜ್ಜನ ಪ್ರತಿಷ್ಠಾನದ ಅಧ್ಯಕ್ಷ ಡಾ.ಉಮ್ಮರ್ ಬೀಜದಕಟ್ಟೆ ಕಾರ್ಯಾಗಾರ ಉದ್ಘಾಟಿಸಿದರು.
ಖ್ಯಾತ ತರಬೇತುದಾರ, ಎವಿಪಿ-ಎಲ್&ಡಿ ಫಾರ್ಮೆಡ್ ಲಿಮಿಟೆಡ್ ಬೆಂಗಳೂರು ಇದರ ವಿಕ್ರಂ ಸಾಗರ್ ಸಕ್ಸೇನ ಅವರು ‘ಎಕ್ಸೆಲೆನ್ಸ್ ಇನ್ ಇನ್ಸ್ಪಿರೇಶನಲ್ ಟೀಚಿಂಗ್’ ಎಂಬ ವಿಷಯದ ಬಗ್ಗೆ ತರಬೇತಿ ನೀಡಿದರು.
ವಿದ್ಯಾಸಂಸ್ಥೆಯ ಅಧ್ಯಕ್ಷ ಹನೀಫ್ ಮಧುರಾ, ಉಪಾಧ್ಯಕ್ಷ ಜಾವೇದ್ ಇಬ್ರಾಹಿಂ, ಸಂಸ್ಥೆಯ ಕಾರ್ಯನಿರ್ವಾಹಕ ಶೈಕ್ಷಣಿಕ ನಿರ್ದೇಶಕರಾದ ರಫೀಕ್ ಮಾಸ್ಟರ್, ಆಡಳಿತಾಧಿಕಾರಿ ನಝೀರ್ ಅಹಮ್ಮದ್, ಮುಖ್ಯ ಶಿಕ್ಷಕಿ ರಮ್ಲತ್.ಕೆ, ಶಿಕ್ಷಕಿಯರಾದ ತಪಸ್ವಿನಿ, ಮನೋದ, ಹಸ್ತಾಕ್ಷಿ, ಶ್ವೇತಾ ಮರಿಯಾ ಡಿಸೋಝ, ಪ್ರತೀಕ್ಷಾ, ಫಾತಿಮತ್ ಝಿಯಾನ, ರಾಬಿಯಾ, ಭವ್ಯಾಮಣಿ, ಶಿಕ್ಷಕ ಮುಹಮ್ಮದ್ ಅನೀಸ್ ಹಾಗೂ ಶಿಕ್ಷಕೇತರ ವೃಂದದವರಾದ ಖದೀಜತ್ ರೈಹಾನ ಉಪಸ್ಥಿತರಿದ್ದರು.