ಒಕ್ಕಲಿಗ ಸಮುದಾಯ ಪತ್ತಿನ ಸಹಕಾರ ಸಂಘದ ನೆಲ್ಯಾಡಿ ಶಾಖೆ 9ನೇ ವರ್ಷಕ್ಕೆ ಪಾದಾರ್ಪಣೆ-ಗಣಹೋಮ, ಲಕ್ಷ್ಮೀ ಪೂಜೆ

0

ನೆಲ್ಯಾಡಿ: ಒಕ್ಕಲಿಗ ಗೌಡ ಸೇವಾ ಸಂಘ ಪುತ್ತೂರು ಪ್ರಾಯೋಜಿತ, ಪುತ್ತೂರಿನ ಎಪಿಎಂಸಿ ರಸ್ತೆಯಲ್ಲಿರುವ ಮಣಾಯಿ ಸಂಕೀರ್ಣದಲ್ಲಿ ಪ್ರಧಾನ ಕಚೇರಿ ಹೊಂದಿರುವ ಒಕ್ಕಲಿಗ ಸಮುದಾಯ ಪತ್ತಿನ ಸಹಕಾರ ಸಂಘದ ನೆಲ್ಯಾಡಿ ಶಾಖೆ ೯ನೇ ವರ್ಷಕ್ಕೆ ಪಾದಾರ್ಪಣೆ ಹಿನ್ನೆಯಲ್ಲಿ ಶಾಖೆಯ ಕಚೇರಿಯಲ್ಲಿ ಗಣಹೋಮ, ಲಕ್ಷ್ಮೀ ಪೂಜೆ ಜೂ.8ರಂದು ನಡೆಯಿತು.

ನೆಲ್ಯಾಡಿ ಗ್ರಾಮದ ಕುತ್ರಾಡಿ ಹಾರ್ಪಳ ಶ್ರೀ ಶಾಸ್ತಾರೇಶ್ವರ ದೇವಸ್ಥಾನದ ಅರ್ಚಕ ಶ್ರೀಧರ ನೂಜಿನ್ನಾಯರವರು ಗಣಹೋಮ, ಲಕ್ಷ್ಮೀ ಪೂಜೆ ನೆರವೇರಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಒಕ್ಕಲಿಗ ಸಮುದಾಯ ಪತ್ತಿನ ಸಹಕಾರ ಸಂಘದ ಆಡಳಿತ ಮಂಡಳಿ ಅಧ್ಯಕ್ಷ ಚಿದಾನಂದ ಬೈಲಾಡಿಯವರು, 2002ರಲ್ಲಿ ಪುತ್ತೂರಿನಲ್ಲಿ ಆರಂಭಗೊಂಡಿರುವ ಒಕ್ಕಲಿಗ ಸಮುದಾಯ ಪತ್ತಿನ ಸಹಕಾರ ಸಂಘವು ಪ್ರಸ್ತುತ ಪುತ್ತೂರು ಎಪಿಎಂಸಿ ರಸ್ತೆಯಲ್ಲಿರುವ ಮಣಾಯಿ ಸಂಕೀರ್ಣದಲ್ಲಿ ಸ್ವಂತ ಕಟ್ಟಡದಲ್ಲಿ ಪ್ರಧಾನ ಕಚೇರಿ ಹೊಂದಿದೆ. ಸಂಘವು ಪುತ್ತೂರು ಹಾಗೂ ಕಡಬ ತಾಲೂಕಿನಲ್ಲಿ ಒಟ್ಟು 7 ಶಾಖೆಗಳನ್ನು ಹೊಂದಿದೆ. ಪುತ್ತೂರು ಎಪಿಎಂಸಿ,  ಕಡಬ, ಉಪ್ಪಿನಂಗಡಿ, ನೆಲ್ಯಾಡಿ, ಕುಂಬ್ರ, ಆಲಂಕಾರು ಹಾಗೂ ಪುತ್ತೂರಿನಲ್ಲಿ ಶಾಖೆಗಳಿವೆ. 2014ರಲ್ಲಿ ನೆಲ್ಯಾಡಿಯಲ್ಲಿ ಶಾಖೆ ಆರಂಭಗೊಂಡಿದ್ದು ಯಶಸ್ವಿಯಾಗಿ ೮ ವರ್ಷ ಪೂರೈಸಿದೆ. ಇಲ್ಲಿನ ಗ್ರಾಹಕರಿಂದ ಉತ್ತಮ ಸ್ಪಂದನೆ ದೊರೆತಿದೆ. 2021-22ನೇ ಸಾಲಿನಲ್ಲಿ ನೆಲ್ಯಾಡಿ ಶಾಖೆಯಲ್ಲಿ 29.46 ಕೋಟಿ ರೂ.,ವ್ಯವಹಾರ ನಡೆದಿದೆ. 4.25 ಕೋಟಿ ರೂ.,ಸಾಲ ವಿತರಣೆಯಾಗಿದ್ದು ವರ್ಷದ ಕೊನೆಗೆ 7.30 ಕೋಟಿ ರೂ.,ಹೊರಬಾಕಿ ಸಾಲ ಇದೆ. ವರ್ಷಾಂತ್ಯಕ್ಕೆ 6.71 ಕೋಟಿ ರೂ.,ಠೇವಣಿ ಇದೆ. ಗ್ರಾಹಕರ ಸಹಕಾರದಿಂದ ಸಂಘವು ಪ್ರಗತಿ ಪಥದಲ್ಲಿ ಸಾಗುತ್ತಿದೆ ಎಂದು ಹೇಳಿದರು.

ಸನ್ಮಾನ: ನೆಲ್ಯಾಡಿ ಶಾಖೆಯಲ್ಲಿ ಸ್ಥಾಪಕ ಮೇನೇಜರ್ ಆಗಿದ್ದು ಇದೀಗ ಪುತ್ತೂರು ಶಾಖೆಗೆ ಮೇನೇಜರ್ ಆಗಿ ವರ್ಗಾವಣೆಗೊಂಡಿರುವ ಶಿವಪ್ರಸಾದ್, ಪುತ್ತೂರು ಎಪಿಎಂಸಿ ರಸ್ತೆ ಶಾಖೆಗೆ ವರ್ಗಾವಣೆಗೊಂಡಿರುವ ಸಿಬ್ಬಂದಿ ರಾಧಾಕೃಷ್ಣ ಹಾಗೂ ಆಲಂಕಾರು ಶಾಖೆಗೆ ವರ್ಗಾವಣೆಗೊಂಡಿರುವ ಇನ್ನೊಬ್ಬ ಸಿಬ್ಬಂದಿ ವಿಜಯಕುಮಾರ್‌ರವರಿಗೆ ಈ ಸಂದರ್ಭದಲ್ಲಿ ಗೌರವಾರ್ಪಣೆ ಮಾಡಲಾಯಿತು. ಒಕ್ಕಲಿಗ ಗೌಡ ಸೇವಾ ಸಂಘ ಪುತ್ತೂರು ಇದರ ಅಧ್ಯಕ್ಷ ವಿಶ್ವನಾಥ ಗೌಡ ಕೆಯ್ಯೂರು, ಒಕ್ಕಲಿಗ ಸಮುದಾಯ ಪತ್ತಿನ ಸಹಕಾರ ಸಂಘದ ಉಪಾಧ್ಯಕ್ಷ ಯು.ಪಿ.ರಾಮಕೃಷ್ಣ ಗೌಡ, ನಿರ್ದೇಶಕರುಗಳಾದ ಜಿನ್ನಪ್ಪ ಗೌಡ ಮುಳುವೇಲು, ಸತೀಶ್ ಪಾಂಬಾರು, ಲೋಕೇಶ್ ಸಿ.ಹೆಚ್., ಸುಪ್ರಿತಾ ರವಿಚಂದ್ರ, ತೇಜಸ್ವಿನಿಶೇಖರ ಗೌಡ, ಸಂಘದ ನಿರ್ದೇಶಕರೂ, ನೆಲ್ಯಾಡಿ ಶಾಖಾ ಸಲಹಾ ಸಮಿತಿ ಅಧ್ಯಕ್ಷರೂ ಆದ ಪ್ರವೀಣ್ ಕುಂಟ್ಯಾನ, ಸಂಘದ ಮಾಜಿ ನಿರ್ದೇಶಕ, ನೆಲ್ಯಾಡಿ ಶಾಖಾ ಸಲಹಾ ಸಮಿತಿ ಸದಸ್ಯರೂ ಆದ ನಾಗೇಶ್ ನಳಿಯಾರು, ನೆಲ್ಯಾಡಿ ಶಾಖಾ ಸಲಹಾ ಸಮಿತಿ ಸದಸ್ಯರಾದ ರಾಧಾಕೃಷ್ಣ ಕೆರ್ನಡ್ಕ, ನೋಣಯ್ಯ ಗೌಡ ಡೆಬ್ಬೇಲಿ, ಡೊಂಬಯ್ಯ ಗೌಡ ಶಿರಾಡಿ, ಜಿನ್ನಪ್ಪ ಗೌಡ ಪೊಸೊಳಿಕೆ, ಸುರೇಶ್ ಪಡಿಪಂಡ, ಸುಲತ ಮೋಹನಚಂದ್ರ, ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸುಧಾಕರ ಕೆ., ಆಂತರಿಕ ಲೆಕ್ಕಪರಿಶೋಧಕ ಶ್ರೀಧರ ಕಣಜಾಲು, ನೆಲ್ಯಾಡಿ ಡೆಂಜ ಕಾಂಪ್ಲೆಕ್ಸ್ ಮಾಲಕ ಪುರಂದರ ಗೌಡ, ನೆಲ್ಯಾಡಿ ಶ್ರೀರಾಮ ಶಾಲಾ ಆಡಳಿತ ಸಮಿತಿ ಅಧ್ಯಕ್ಷ ರವಿಚಂದ್ರ ಹೊಸವೊಕ್ಲು, ನೆಲ್ಯಾಡಿ ಶಾರದಾ -ನ್ಸಿಯ ಜಯಕುಮಾರ್, ಬಾಲಕೃಷ್ಣ ಗೌಡ ಹೇಗರ್ನಡಿ, ತಿಮ್ಮಪ್ಪ ಗೌಡ ಇಚ್ಚೂರು, ಜನಾರ್ದನ ಗೌಡ ಪಿಲವೂರು, ಬೆಳಿಯಪ್ಪ ಗೌಡ ಕಜೆ, ಯೋಧಾನಂದ ಕೊಕ್ಕಡ ಸೇರಿದಂತೆ ಹಲವು ಮಂದಿ ಭೇಟಿ ನೀಡಿ ಶುಭಹಾರೈಸಿದರು. ನೆಲ್ಯಾಡಿ ಶಾಖಾ ಮೇನೇಜರ್ ವಿನೋದ್‌ರಾಜ್ ಎಸ್.,ವಂದಿಸಿದರು. ಸಿಬ್ಬಂದಿಗಳಾದ ಕಾರ್ತಿಕ್ ಎಂ., ಅಜಿತ್‌ಕುಮಾರ್, ಪುತ್ತೂರು ಶಾಖೆಯ ಸಿಬ್ಬಂದಿ ಯಕ್ಷಿತ್ ಸಹಕರಿಸಿದರು.

LEAVE A REPLY

Please enter your comment!
Please enter your name here