ವಿಟ್ಲ: ಕೋಲ್ಪೆ ಶ್ರೀ ಷಣ್ಮುಖ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ವಿವಿಧ ಕಾಮಗಾರಿಗಳ ಬಗ್ಗೆ ಸಮಾಲೋಚನೆ ನಡೆಸಿ ಬಳಿಕ ಪರಿಶೀಲನೆ ಮಾಡಲಾಯಿತು. ಈ ಸಂದರ್ಭದಲ್ಲಿ ವಾಸ್ತುತಜ್ಞರಾದ ನಾಗೇಶ್ ಕುಂಡಡ್ಕ, ಶಿಲ್ಪಿಗಳಾದ ಪ್ರಶಾಂತ್ ಮುಂಡೂರು, ಕ್ಷೇತ್ರದ ಆಡಳಿತ ಮೊತ್ತೇಸರರಾದ ಸುರೇಶ್ ಕೆ.ಎಸ್.ಮುಕ್ಕುಡ, ಜೀರ್ಣೋದ್ದಾರ ಸಮಿತಿ ಗೌರವಾಧ್ಯಕ್ಷ ರಮೇಶ್ ಭಟ್ ಭಂಡಾರಮನೆ, ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ರಾಜಾರಾಮ ಶೆಟ್ಟಿ ಕೊಲೆಗುತ್ತು, ಪ್ರಧಾನ ಕಾರ್ಯದರ್ಶಿ ಪ್ರಫುಲ್ಲ ಚಂದ್ರ ಪಿ.ಜಿ ಕೋಲ್ಪೆ, ಮರದ ಕೆಲಸದ ಪ್ರಸಾದ್ ಮೈಕೆ. ಗ್ರಾನೈಟ್ ಕೆಲಸದ ನವೀನ್ ನಾಯ್ಕ್ ನೇರ್ಲಾಜೆ, ಮೇಸ್ತ್ರಿಗಳಾದ ಪುರಂದರ ದರ್ಬೆ ಮತ್ತು ಮಹಾಬಲ ಬೀಡು, ಗ್ರಾಮಸ್ಥರಾದ ಸುಬ್ರಹ್ಮಣ್ಯ ಭಟ್, ದೇವಸ್ಯ ತಿಮ್ಮಪ್ಪ ಸಪಲ್ಯ. ಮಿತ್ತೂರು ಈಶ್ವರ್ ಕುಲಾಲ್ ಮೊದಲಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.