ಪುತ್ತೂರು:ತೆಂಗಿನ ಕಾಯಿ ಸಾಗಾಟದ ಪಿಕಪ್ ವಾಹನವೊಂದು ಮಾಣಿ ಮೈಸೂರು ರಾಷ್ಟ್ರೀಯ ಹೆದ್ದಾರಿ ಕಬಕ ಸಮೀಪದ ಪೋಳ್ಯದಲ್ಲಿ ಜೂ.9ರಂದು ಪಲ್ಟಿಯಾಗಿ ಬಿದ್ದಿದೆ. ತೆಂಗಿನ ಕಾಯಿ ಹೇರಿಕೊಂಡು ಕಲ್ಲಡ್ಕದಿಂದ ಪುತ್ತೂರಿಗೆ ಬರುತ್ತಿದ್ದ ಪಿಕಪ್ ವಾಹನ ಪೋಳ್ಯ ತಲುಪುತ್ತಿದ್ದಂತೆ ಅದರ ಮುಂದಿನಿಂದ ಸಂಚರಿಸುತ್ತಿದ್ದ ನ್ಯಾನೋ ಕಾರಿನ ವೇಗ ಏಕಾಏಕಿ ನಿಧಾನವಾಗಿದ್ದರಿಂದ ಪಿಕಪ್ ವಾಹನದ ಚಾಲಕ ಮಹಮ್ಮದ್ ಮುಸ್ತಾಫ ಅವರ ನಿಯಂತ್ರಣ ತಪ್ಪಿದ ಪಿಕಪ್ ಪಲ್ಟಿಯಾಗಿದೆ.ಘಟನೆಯಿಂದ ವಾಹನಕ್ಕೆ ಹಾನಿಯಾಗಿದ್ದು ತೆಂಗಿನ ಕಾಯಿಗಳು ಒಡೆದು ನಷ್ಟ ಸಂಭವಿಸಿದೆ ಎನ್ನಲಾಗಿದೆ.ಚಾಲಕ ಸಣ್ಣ ಪುಟ್ಟ ಗಾಯಗೊಂಡಿದ್ದಾರೆಂದು ತಿಳಿದು ಬಂದಿದೆ.