- ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಅಮೈ ಮಹಾಲಿಂಗ ನಾಯ್ಕ್ರವರಿಗೆ ಗಿಡ ಹಸ್ತಾಂತರ
ಪುತ್ತೂರು: ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ವಿದ್ಯಾರ್ಥಿಗಳಲ್ಲಿ, ಯುವಜನತೆಯಲ್ಲಿ ಪರಿಸರದ ಬಗ್ಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ರಾಜ್ಯಾದ್ಯಂತ ಆಯೋಜಿಸಿರುವ Think Green – Restore Ecosystem ಎಂಬ ಅಭಿಯಾನವು ಸಿಎಫ್ಐ ವಿಟ್ಲ ಸಮಿತಿ ವತಿಯಿಂದ ಜೂ.8ರಂದು ನಡೆಯಿತು.
ಆ ಪ್ರಯುಕ್ತ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಅಮೈ ಮಹಾಲಿಂಗ ನಾಯ್ಕ್ ಅವರಿಗೆ ಗಿಡ ಹಸ್ತಾಂತರಿಸಿ ಪರಿಸರ ಸಂರಕ್ಷಣೆಯ ಬಗ್ಗೆ ಮಾತುಕತೆ ನಡೆಸಲಾಯಿತು. ಕ್ಯಾಂಪಸ್ ಫ್ರಂಟ್ ವಿಟ್ಲ ಜಿಲ್ಲಾಧ್ಯಕ್ಷ ಫಯಾಝ್, ಕಾರ್ಯದರ್ಶಿ ಉಮ್ಮರ್ ಮುಕ್ತಾರ್, ಸಮಿತಿ ಸದಸ್ಯರಾದ ಹಕಂ, ವಿಟ್ಲ ವಲಯ ಅಧ್ಯಕ್ಷ ಸಿದ್ದೀಕ್, ಅಡ್ಯನಡ್ಕ ಘಟಕ ಅಧ್ಯಕ್ಷ ಫಾರಿಸ್ ಮತ್ತು ನಿಹಾಲ್ ಉಪಸ್ಥಿತರಿದ್ದರು.