ಕುರಿಯ: ಅಂಗಡಿ ವ್ಯಾಪಾರಸ್ಥ ರಮೇಶ್ ರೈ ಆತ್ಮಹತ್ಯೆ

0

ಪುತ್ತೂರು: ವ್ಯಕ್ತಿಯೋರ್ವರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕುರಿಯ ಗ್ರಾಮದ ಹೊಸಮಾರು ಎಂಬಲ್ಲಿ ನಡೆದಿದೆ.

ಕುರಿಯ ವಿಷ್ಣುನಗರ ಅಜಲಾಡಿಯಲ್ಲಿ ಅಂಗಡಿ ಹೊಂದಿದ್ದ ರಮೇಶ್ ರೈ(55.ವ) ಆತ್ಮಹತ್ಯೆ ಮಾಡಿಕೊಂಡವರು. ಇವರು ಜೂ.9ರಂದು ರಾತ್ರಿ ವೇಳೆ ತೋಟದಲ್ಲಿ ವಿಷ ಸೇವಿಸಿದ್ದು ಬಳಿಕ ನೀರು ಕುಡಿಯಲೆಂದು ಸಮೀಪದ ಕೆರೆಗೆ ಇಳಿದಿದ್ದು ಅಸ್ವಸ್ಥಗೊಂಡು ಅಲ್ಲೇ ಬಾಕಿಯಾಗಿದ್ದರು ಎನ್ನಲಾಗಿದೆ. ಮಾಹಿತಿ ತಿಳಿದ ಮನೆಯವರು ಮತ್ತು ಸ್ಥಳೀಯರು ಸೇರಿಕೊಂಡು ಅವರನ್ನು ಪುತ್ತೂರು ಆಸ್ಪತ್ರೆಗೆ ದಾಖಲಿಸಿ ಬಳಿಕ ಮಂಗಳೂರಿನ ಆಸ್ಪತ್ರೆಗೆ ದಾಖಲಿಸುವ ವೇಳೆ ಅವರು ಮೃತಪಟ್ಟಿರುವುದಾಗಿ ತಿಳಿದು ಬಂದಿದೆ. ಮೃತರು ಪತ್ನಿ ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here