ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಸಂಸ್ಥೆಯ ಹಿರಿಯ ಸಹಾಯಕ ಭಾಸ್ಕರ ಗೌಡ ಸೇವಾ ನಿವೃತ್ತಿ

0

ಪುತ್ತೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಸಂಸ್ಥೆಯಲ್ಲಿನ ಸುಮಾರು 33 ವರ್ಷಗಳ ಕಾಲ ವಿವಿಧ ಹುದ್ದೆಗಳಲ್ಲಿ ಸೇವೆ ಸಲ್ಲಿಸಿದ ಕಾರ್ಮಿಕ ಮತ್ತು ಕಲ್ಯಾಣ ಇಲಖೆಯ ಹಿರಿಯ ಸಹಾಯಕ ಭಾಸ್ಕರ ಗೌಡ ಏಣಾಜೆರವರು ಮೇ 31 ರಂದು ಸೇವಾ ನಿವೃತ್ತಿ ಹೊಂದಿದ್ದಾರೆ.

ಏಣಾಜೆ ದಿ.ರಾಮಯ್ಯ ಗೌಡ ಹಾಗೂ ದಿ.ನೇಮಕ್ಕರವರ ಪುತ್ರರಾದ ಭಾಸ್ಕರ ಗೌಡರವರು 1989, ಡಿಸೆಂಬರ್ ಆರರಂದು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಸಂಸ್ಥೆಯಲ್ಲಿನ ಮಂಗಳೂರು ಡಿಪೋದಲ್ಲಿ ಜ್ಯೂನಿಯರ್ ಅಸಿಸ್ಟೆಂಟ್ ಆಗಿ ಸೇವೆಯನ್ನು ಆರಂಭಿಸಿದರು. 2012ರಲ್ಲಿ ಪುತ್ತೂರಿನ ಕಾರ್ಮಿಕ ಮತ್ತು ಕಲ್ಯಾಣ ಘಟಕಕ್ಕೆ ಸೀನಿಯರ್ ಅಸಿಸ್ಟೆಂಟ್ ಆಗಿ ಪದೋನ್ನತಿ ಹೊಂದಿದ್ದರು. ಭಾಸ್ಕರ ಗೌಡರವರು ಕರ್ನಾಟಕ ರಾಜ್ಯ ಸಾರಿಗೆ ನಿಗಮ ಸಂಸ್ಥೆಯಲ್ಲಿ ಸಲ್ಲಿಸಿದ ಗಮನಾರ್ಹ ಸೇವೆಗೆ ಮೂರು ಬಾರಿ ಪ್ರಶಂಸಾ ಪತ್ರವನ್ನು ಪಡೆದುಕೊಂಡಿದ್ದರು. ಭಾಸ್ಕರ ಗೌಡರವರು ಪ್ರಸ್ತುತ ಪತ್ನಿ ವಿಜಯ ಕುಮಾರಿ ನರಿಯೂರು, ಪುತ್ರಿಯರಾದ ಎಂಕಾಂ ಪದವೀಧರೆ, ಸೈಂಟ್ ಆನ್ಸ್ ನಲ್ಲಿ ಬಿಎಡ್ ಪದವಿಯನ್ನು ಮಾಡುತ್ತಿರುವ ಪರಿಣಿತಾ ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಎಂಎಸ್ಸಿ ಕೆಮಿಸ್ಟ್ರಿ ವ್ಯಾಸಂಗ ಮಾಡುತ್ತಿರುವ ವಿನೀತಾ, ಪುತ್ರ ಮಂಗಳೂರಿನಲ್ಲಿ ಡಿಪ್ಲೋಮಾ ಇನ್ ಸಿವಿಲ್ ಓದುತ್ತಿರುವ ಪ್ರಖ್ಯಾತ್ ರವರನ್ನು ಹೊಂದಿರುತ್ತಾರೆ.

LEAVE A REPLY

Please enter your comment!
Please enter your name here