ಕುದ್ಮಾರು: ಶ್ರೀ ಶಿರಾಡಿ ದೈವದ ಕಟ್ಟೆಯ ಪ್ರತಿಷ್ಠಾಪನೆ, ನೇಮೋತ್ಸವದ ಲೆಕ್ಕಚಾರ ಮಂಡನೆ, ಆಡಳಿತ ಮಂಡಳಿ ಸಭೆ

0

 

ಕಾಣಿಯೂರು: ಕುದ್ಮಾರು ಅನ್ಯಾಡಿ ಗ್ರಾಮ ದೈವ ಶ್ರೀ ಶಿರಾಡಿ ರಾಜನ್ ದೈವಸ್ಥಾನದ ದೈಪಿಲ ದ್ವಾರದ ಬಳಿ ಕಟ್ಟತ್ತಾರು ಎಂಬಲ್ಲಿ ಶ್ರೀ ಶಿರಾಡಿ ದೈವದ ಕಟ್ಟೆಯ ಪ್ರತಿಷ್ಠಾಪನೆ ಹಾಗೂ ನೇಮೋತ್ಸವವು ಮೇ 19 ಮತ್ತು 20 ರಂದು ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ನಡೆದಿದ್ದು, ಕಾರ್ಯಕ್ರಮದ ಲೆಕ್ಕಚಾರ ಮಂಡನೆ ಮತ್ತು ಆಡಳಿತ ಮಂಡಳಿಯ ಸಭೆಯು ಅನ್ಯಾಡಿ ಚಾವಡಿಯಲ್ಲಿ ನಡೆಯಿತು.

 

ಶಾಂತಿಮೊಗರು ಶ್ರೀ ಸುಬ್ರಹ್ಮಣ್ಯೇಶ್ವರ ದೇವಸ್ಥಾನದ ಆಡಳಿತ ಸಮಿತಿ ಅಧ್ಯಕ್ಷರು, ಕುದ್ಮಾರು ಅನ್ಯಾಡಿ ಶ್ರೀ ಶಿರಾಡಿ ರಾಜನ್ ದೈವಸ್ಥಾನದ ಆಡಳಿತ ಸಮಿತಿ ಅಧ್ಯಕ್ಷರು ಆಗಿರುವ ಸತೀಶ್ ಕುಮಾರ್ ಕೆಡೆಂಜಿ, ಶಾಂತಿಮೊಗರು ಶ್ರೀ ಸುಬ್ರಹ್ಮಣ್ಯೇಶ್ವರ ದೇವಸ್ಥಾನದ ಬ್ರಹ್ಮಕಲಶೋತ್ಸವ ಸಮಿತಿ ಕಾರ್ಯದರ್ಶಿ ವೆಂಕಟೇಶ್ ಭಟ್ ಕೊಯಕ್ಕುಡೆ, ಅನ್ಯಾಡಿ ಬಾರಿಕೆ ಕುಟುಂಬದ ಹಿರಿಯರಾದ ಪದ್ಮಯ್ಯ ಗೌಡ ಅನ್ಯಾಡಿ, ಪದ್ಮಯ್ಯ ಗೌಡ ಕೆಡೆಂಜಿ, ಮೋನಪ್ಪ ಗೌಡ ಅನ್ಯಾಡಿ, ದೇವಣ್ಣ ಗೌಡ ಅನ್ಯಾಡಿ, ಆಡಳಿತ ಸಮಿತಿ ಉಪಾಧ್ಯಕ್ಷ ಆನಂದ ಅನ್ಯಾಡಿ, ಚೆನ್ನಪ್ಪ ಗೌಡ ನೂಜಿ, ದೇವಪ್ಪ ಗೌಡ ನಡುಮನೆ, ಐತಪ್ಪ ಗೌಡ ಕುವೆತ್ತೋಡಿ, ಬೆಳಂದೂರು ಗ್ರಾ.ಪಂ. ಅಧ್ಯಕ್ಷ ಲೋಹಿತಾಕ್ಷ ಕೆಡೆಂಜಿಕಟ್ಟ, ಆಡಳಿತ ಮಂಡಳಿಯ ಪ್ರಧಾನ ಕಾರ್ಯದರ್ಶಿ ನಾಗೇಶ್ ಕೆ.ಕೆಡೆಂಜಿ, ಜತೆ ಕಾರ್ಯದರ್ಶಿ ಶೂರಪ್ಪ ಗೌಡ ಪಟ್ಟೆತ್ತಾನ, ಕೋಶಾಧಿಕಾರಿ ಉಮೇಶ್ ಕೆರೆನಾರು, ಅನ್ಯಾಡಿ ಬಾರಿಕೆ ಕುಟುಂಬದ ಅಧ್ಯಕ್ಷ ಯೋಗೀಶ್ ಕೆಡೆಂಜಿ, ಆಡಳಿತ ಸಮಿತಿ ಸದಸ್ಯರಾದ ಜನಾರ್ದನ ಗೌಡ ಕೂರಮನೆ, ಲೋಕೇಶ್ ಬಿ.ಎನ್, ಯತೀಶ್ ನಡುಮನೆ, ಪದ್ಮನಾಭ ದೋಳ, ಸತೀಶ್ ಹೊಸವೊಕ್ಲು, ಸೋಮಪ್ಪ ಗೌಡ ಅನ್ಯಾಡಿ, ಶಿವಪ್ಪ ಗೌಡ ಕಾಪೆಜಾಲು, ಎಲ್ಯಣ್ಣ ಗೌಡ ಖಂಡಿಗ, ಪೂವಣಿ ಗೌಡ ಅನ್ಯಾಡಿ, ಶಿವಾನಂದ ಕೆಡೆಂಜಿಕಟ್ಟ, ಪುಷ್ಪಾಲತಾ ಪಿ.ಗೌಡ, ಸುಬ್ರಾಯ ಗೌಡ ಕೆರೆನಾರು, ಮಹಾಲಿಂಹ ಗೌಡ ಹೊಸವೊಕ್ಲು, ಚೆನ್ನಪ್ಪ ಗೌಡ ಅನ್ಯಾಡಿ ಮತ್ತೀತರರು ಉಪಸ್ಥಿತರಿದ್ದರು. ಆಡಳಿತ ಸಮಿತಿ ಪ್ರಧಾನ ಕಾರ್ಯದರ್ಶಿ ನಾಗೇಶ್ ಕೆ.ಕೆಡೆಂಜಿ ಸ್ವಾಗತಿಸಿ, ವಂದಿಸಿದರು.

LEAVE A REPLY

Please enter your comment!
Please enter your name here