- ಖಾಸಗಿ ಬಸ್ನಿಲ್ದಾಣದ ಬಳಿ ಚರಂಡಿಯಲ್ಲಿ ತುಂಬಿದ ಬಾಟಲಿಗಳು !
ಪುತ್ತೂರು: ನಗರಸಭೆಯಿಂದ ಮಳೆಗೂ ಮುನ್ನ ಮುನ್ನೆಚ್ಚರಿಕೆ ಕ್ರಮವಾಗಿ ರಾಜಕಾಲುವೆಯಿಂದ ಹೂಳೆತ್ತುವ ಕೆಲಸ ಪೂರ್ಣಗೊಂಡ ಬಳಿಕ ವಾರ್ಡ್ಗಳ ಚರಂಡಿಯಿಂದ ಹೂಳೆತ್ತುವ ಕೆಲಸ ಆರಂಭಗೊಂಡಿದೆ.
ಇಲ್ಲಿನ ಖಾಸಗಿ ಬಸ್ನಿಲ್ದಾಣದ ಚರಂಡಿ ಹೂಳೆತ್ತುವ ಸಮಯ ಲೋಡುಗಟ್ಟಲೇ ಪ್ಲಾಸ್ಟಿಕ್ ಬಾಟಲಿಗಳು ಚರಂಡಿಯಲ್ಲಿ ತುಂಬಿರುವುದು ಬೆಳಕಿಗೆ ಬಂದಿದೆ.
ಇತ್ತೀಚೆಗೆ ಮಳೆ ಬಂದಾಗ ರಸ್ತೆಯಲ್ಲೇ ಮಳೆ ನೀರು ಹರಿದು ವಾಹನ ಸವಾರರು ಮತ್ತು ಸಾರ್ವಜನಿಕರಿಗೆ ತೊಂದರೆ ಉಂಟಾದ ಸ್ಥಿತಿ ಪುತ್ತೂರು ಖಾಸಗಿ ಬಸ್ ನಿಲ್ದಾಣದ ರಸ್ತೆಯಲ್ಲಿ ನಡೆದಿತ್ತು. ಈ ಕುರಿತು ನಗರಸಭೆ ವಾರ್ಡ್ಗಳ ಎಲ್ಲಾ ಚರಂಡಿಗಳಲ್ಲಿ ಮಳೆ ನೀರು ಸರಾಗವಾಗಿ ಹರಿಯುವ ಉದ್ದೇಶದಿಂದ ಹೂಳು ತೆಗೆಯುವ ಕಾರ್ಯಕ್ಕೆ ಸಂಬಂಧಿಸಿ ಜೂ. ೧೧ರಂದು ಬೆಳಿಗ್ಗೆ ನೆಲ್ಲಿಕಟ್ಟೆ ಖಾಸಗಿ ಬಸ್ನಿಲ್ದಾಣದ ಬಳಿಯ ಚರಂಡಿ ಸ್ಲಾಬ್ ಅನ್ನು ಹಿಟಾಚಿ ಮೂಲಕ ತೆರೆದಾಗ ಲೋಡುಗಟ್ಟಲೇ ಪ್ಲಾಸ್ಟಿಕ್ ಬಾಟಲಿಗಳು ನಿಂತು ಚರಂಡಿಯೊಳಗೆ ನಿಂತು ಬ್ಲಾಕ್ ಆಗಿರುವುದು ಬೆಳಕಿಗೆ ಬಂದಿದೆ. ಇದರ ಜೊತೆಗೆ ಚಿಂದಿಗೊಂಡಿರುವ ಬಟ್ಟೆಗಳು ಚರಂಡಿಯಲ್ಲಿ ಸಿಲುಕಿ ಕೊಂಡು ಮಳೆ ನೀರು ಹರಿಯವಿಗೆ ಅಡ್ಡಿಯಾಗಿದೆ. ನಗರಸಭೆ ಪೌರಕಾರ್ಮಿಕರು ಹೂಳೆತ್ತುವ ಕೆಲಸ ಆರಂಭಿಸಿದ್ದಾರೆ.