- ಶ್ರೀನಿಧಿ ಬೋರ್ವೆಲ್ಸ್ನ ವಿಸ್ತ್ರತ ಮಳಿಗೆ
- ಪಂಪ್ಸೆಟ್ಗಳ ಮಾರಾಟ ಹಾಗೂ ಸೇವಾ ವಿಭಾಗ
ಪುತ್ತೂರು: ಕಳೆದ 32 ವರ್ಷಗಳಿಂದ ಬೋರ್ವೆಲ್ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದ ದರ್ಬೆಯ ಶ್ರೀನಿಧಿ ಬೋರ್ವೆಲ್ಸ್ನ ವಿಸ್ತ್ರತ ಮಳಿಗೆ ಶ್ರೀನಿಧಿ ಆಗ್ರೋ ಸರ್ವೀಸ್ ಮೇ 11ರಂದು ದರ್ಬೆ ಮುಖ್ಯರಸ್ತೆಯ ಮೊಹಿದ್ದೀನ್ ಟವರ್ಸ್ನಲ್ಲಿ ಶುಭಾರಂಭಗೊಂಡಿತು.
ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಅರ್ಚಕರಾದ ವೇ.ಮೂ. ಜಯರಾಂ ಜೋಯಿಷ ಅವರು ಶ್ರೀ ಮಹಾಲಕ್ಷ್ಮೀ ಪೂಜೆ ನೆರವೇರಿಸಿ, ದೀಪ ಬೆಳಗಿಸಿ ಸಂಸ್ಥೆಯನ್ನು ಉದ್ಘಾಟಿಸಿ ಶುಭಹಾರೈಸಿದರು. ಇವರಿಗೆ ಸಹಾಯಕರಾಗಿ ಕೃಷ್ಣಪ್ರಕಾಶ್ ಸಹಕರಿಸಿದರು. ದಯಾನಂದ ಸವಣೂರು ಅವರು ಸಂಸ್ಥೆಯಿಂದ ಖರೀದಿ ಮಾಡುವ ಮೂಲಕ ಸಂಸ್ಥೆಯ ಪ್ರಥಮ ಗ್ರಾಹಕರಾದರು.
ಸಂಸ್ಥೆಯ ಮಾಲಕ ಗೋಪಾಲಕೃಷ್ಣ ಪಿ., ಅವರ ತಾಯಿ ಮೀನಾಕ್ಷಿಅಮ್ಮ, ಗೋಪಾಲಕೃಷ್ಣ ಪಿ. ಅವರ ಪತ್ನಿ ಗಾಯತ್ರಿದೇವಿ, ಪುತ್ರರಾದ ಶ್ರೀನಿಧಿ, ಶ್ರೇಯಸ್, ಕಟ್ಟಡದ ಮಾಲಕರಾದ ಜಗನ್ನಾಥ ರೈ, ಬೈಂಕ್ರೋಡ್ ಕೃಷ್ಣ ಭಟ್, ಅರುಣ್ ಕುಮಾರ್ ಶೆಡ್ಡೆ, ಕಿಸಾನ್ ಆಗ್ರೋದ ಗೋಪಾಲಕೃಷ್ಣ ಭಟ್, ಅಭಿಜಿತ್, ನವೀನ್ ಬೋರ್ವೆಲ್ಸ್ನ ಪಳನಿಯಪ್ಪನ್, ಸ್ವರ್ಣಭೂಮಿ ಬೋರ್ವೆಲ್ಸ್ನ ರಾಜೇಂದ್ರ, ಉಪ್ಪಿನಂಗಡಿ ರಾಜ್ ಬೋರ್ವೆಲ್ಸ್ನ ಮಾಲಕ ಕೃಷ್ಣರಾಜ್, ಗಣಪತಿ ಭಟ್ ಕೋಡಿಂಬಾಳ – ಕಡಬ ಸಂಸ್ಥೆಯ ಸಿಬ್ಬಂದಿಗಳಾದ ರಾಜೇಶ್, ರಘುರಾಜ್ ಉಪಸ್ಥಿತರಿದ್ದರು.
ಕೊಳವೆಬಾವಿ, ಕೆರೆ ಹಾಗೂ ಬಾವಿ ಅಗತ್ಯವಾಗಿರುವ ಪಂಪ್ಸೆಟ್ಗಳ ಮಾರಾಟ ಮತ್ತು ಸೇವೆ ಶ್ರೀನಿಧಿ ಆಗ್ರೋ ಸರ್ವೀಸ್ನಲ್ಲಿ ನಡೆಯಲಿದೆ. ಬೋರ್ವೆಲ್ಗಳಿಗೆ ಸಬ್ಮರ್ಸಿಬಲ್ ಮತ್ತು ಕಂಪ್ರೆಷರ್, ಕೆರೆ – ಬಾವಿಗಳಿಗೆ ಮೋನೊಬ್ಲಾಕ್ ಪಂಪ್ಗಳು ಶ್ರೀನಿಧಿ ಆಗ್ರೋ ಸರ್ವೀಸ್ನಲ್ಲಿ ಲಭ್ಯವಾಗಲಿದೆ. ಪಂಪ್ಸೆಟ್ಗಳ ಜೊತೆಗೆ ಸೇವಾ ವಿಭಾಗವೂ ಶ್ರೀನಿಧಿ ಬೋರ್ವೆಲ್ಸ್ನ ಪಕ್ಕದಲ್ಲೇ ಕಾರ್ಯನಿರ್ವಹಿಸಲಿದೆ ಎಂದು ಸಂಸ್ಥೆಯ ಮಾಲಕ ಗೋಪಾಲಕೃಷ್ಣ ಪಿ. ತಿಳಿಸಿದ್ದಾರೆ.