ಪುತ್ತೂರು: ಶಾಂತಿಗೋಡು ಗ್ರಾಮದ ಆನಡ್ಕ ಜಂಕ್ಷನ್ನಿಂದ ಅಜ್ಜಿಕಲ್ಲುವರೆಗಿನ ರಸ್ತೆ ಬದಿಯ ಹುಲ್ಲು, ಪೊದರುಗಳನ್ನು ಸ್ಥಳೀಯ ಯುವಕರು ಶ್ರಮದಾನದ ಮೂಲಕ ತೆರವುಗೊಳಿಸಿದರು. ನರಿಮೊಗರು ಗ್ರಾ.ಪಂ.ಸದಸ್ಯ ದಿನೇಶ್ ಗೌಡ ಮಜಲು ಹಾಗೂ ಗ್ರಾ.ಪಂ.ಸದಸ್ಯ ತಾರನಾಥ ಆನಡ್ಕರವರ ನೇತೃತ್ವದಲ್ಲಿ ಸುಭಾಶ್ಚಂದ್ರ ನಾಯಕ್ ಮಜಲು, ಹರೀಶ್ ನಾಯ್ಕ ಬಿರ್ಮನಕಜೆ, ಪ್ರಶಾಂತ್ ವಾಳ್ತಾಜೆ, ವಿಶ್ವನಾಥ ಮಜಲು, ತಿಲಕ್ ಮಜಲು, ಹೊನ್ನಪ್ಪ ಗೌಡ ಮಜಲು, ಯಾದವ ಗೌಡ ಅಜ್ಜಿಕಲ್ಲು ಮೊದಲಾದವು ಭಾಗವಹಿಸಿದರು.