ಪುತ್ತೂರು: ನೂಜಿಬಾಳ್ತಿಲ ಅರಣ್ಯ ಇಲಾಖೆ, ನೂಜಿಬಾಳ್ತಿಲ ಗ್ರಾ.ಪಂ., ಸ.ಉ.ಹಿ.ಪ್ರಾ, ಶಾಲೆ ಸಹಯೋಗದಲ್ಲಿ ಬೀಜ ಬಿತ್ತೋತ್ಸವ ಕಾರ್ಯಕ್ರಮ ನೂಜಿಬಾಳ್ತಿಲದಲ್ಲಿ ನಡೆಯಿತು.
ನೂಜಿಬಾಳ್ತಿಲ ಶಾಲಾ ವಠಾರದಲ್ಲಿ ಗಿಡ ನಾಟಿ ಮಾಡಲಾಯಿತು. ಬಳಿಕ ನೂಜಿಬಾಳ್ತಿಲದ ಬಳಕ್ಕ ಅರಣ್ಯ ಪ್ರದೇಶದಲ್ಲಿ ಬಿತ್ತೋತ್ಸವ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ವಿಶೇಷ ಅಗತ್ಯವುಳ್ಳ ಮಕ್ಕಳಿಂದ ಗಿಡ ನಾಟಿ ಕಾರ್ಯಕ್ರಮವೂ ನಡೆಯಿತು. ಮಕ್ಕಳು ಸಂಗ್ರಹಿಸಿದ ಹಾಗೂ ಅರಣ್ಯ ಇಲಾಖೆಯವರು ಸಂಗ್ರಹಿಸಿದ ಹಣ್ಣಿನ ಜಾತಿಯ ಬೀಜಗಳನ್ನು ಸ್ಥಳೀಯ ಅರಣ್ಯ ವ್ಯಾಪ್ತಿಯಲ್ಲಿ ಬಿತ್ತಲಾಯಿತು. ಉಪ ಅರಣ್ಯ ಸಂರಕ್ಷಣಾಧಿಕಾರಿ ದಿನೇಶ್ ಕುಮಾರ್, ವಲಯ ಅರಣ್ಯಾಧಿಕಾರಿ ರಾಘವೇಂದ್ರ ಹೆಚ್.ಎಸ್., ಮಹೇಶ್ ದೇವಾಡಿಗ, ಯೋಗೀಶ್, ಗ್ರಾ.ಪಂ. ಅಧ್ಯಕ್ಷೆ ಗಂಗಮ್ಮ, ಪ್ರಭಾರ ಪಿಡಿಒ ಗುರುವ ಎಸ್., ಸಿಆರ್ಪಿ ಗೋವಿಂದ ನಾಯಕ್, ಗ್ರಾ.ಪಂ. ಸದಸ್ಯರು, ಶಾಲಾ ಶಿಕ್ಷಕರು, ಎಸ್ಡಿಎಂಸಿ ಯವರು, ಅರಣ್ಯ ಇಲಾಖೆ ಅಧಿಕಾರಿಗಳು, ಸಿಬ್ಬಂದಿಗಳು, ವಿದ್ಯಾರ್ಥಿಗಳು, ಗ್ರಾಮಸ್ಥರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.