ನೆಲ್ಯಾಡಿ: ನೆಲ್ಯಾಡಿ ಬೆಥನಿ ಜ್ಞಾನೋದಯ ಆಂಗ್ಲಮಾಧ್ಯಮ ಶಾಲೆಯ 2022-23ನೇ ಸಾಲಿನ ಶಿಕ್ಷಕ-ರಕ್ಷಕ ಸಮಿತಿಯನ್ನು ರಚಿಸಲಾಯಿತು. ಬೆಥನಿ ಸಂಸ್ಥೆಯ ನಿರ್ದೇಶಕರಾದ ರೆ.ಫಾ.ಡಾ| ವರ್ಗಿಸ್ ಕೈಪನಡ್ಕ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಯಿತು.
2022-23ನೇ ಸಾಲಿನ ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷರಾಗಿ ನೆಲ್ಯಾಡಿ ಗ್ರಾ.ಪಂ.ಮಾಜಿ ಸದಸ್ಯ ಅಬ್ರಹಾಂ ಕೆ.ಪಿ., ಕಾರ್ಯದರ್ಶಿಯಾಗಿ ಶಿಕ್ಷಕಿ ನಯನಾ, ಉಪಾಧ್ಯಕ್ಷರಾಗಿ ಸುಮಯ ಹಾಗೂ ರೋಷನ್ ಜಮೀರ್ ಆಯ್ಕೆಯಾದರು. ಸಮಿತಿ ಸದಸ್ಯರಾಗಿ ಪ್ರಮೀಳಾ, ರಾಜೇಶ್ವರಿ, ಮನೋಜ್ ಜಾರ್ಜ್, ಜಯರಾಜ್, ಶ್ರೀನಿ, ದಿನಕರ್, ಡಿಂಪಲ್, ಪೂವಪ್ಪ, ಅಶುರಾ, ಹಮೀರ್, ಸುಧಾಕರ್, ನಾರಾಯಣ, ಸನ್ನಿ ಕೆ.ಎಸ್, ಆಫ್ಸಲ್, ಗಂಗಾಧರ್ ಶೆಟ್ಟಿ, ಪ್ರಕಾಶ್, ರೆಜಿ ಕೆ.ಜೆ, ಪೂರ್ಣಿಮಾ, ರಘುವೀರ್, ಶಾಜಿರವರು ಆಯ್ಕೆಯಾದರು. ಶಾಲಾ ಪ್ರಿನ್ಸಿಪಾಲ್ ರೆ.ಫಾ.ತೋಮಸ್ ಬಿಜಿಲಿ, ಶಿಕ್ಷಕ-ರಕ್ಷಕ ಸಂಘದ ಮಾಜಿ ಅಧ್ಯಕ್ಷ ಗಂಗಾಧರ್ ಶೆಟ್ಟಿ, ಶಾಲಾ ಆಡಳಿತ ಸಮಿತಿ ಪದಾಧಿಕಾರಿಗಳಾದ ರೆ.ಫಾ ಮೇಲ್ವಿನ್ ಒ.ಐ.ಸಿ, ರೆ.ಫಾ. ಜೈಸನ್ ಸೈಮನ್, ಶಿಕ್ಷಕರಾದ ಜೋಸ್ ಎಂ.ಜೆ, ಜಾರ್ಜ್ ತೋಮಸ್, ಸುಶೀಲ್ ಕುಮಾರ್ ಸೇರಿದಂತೆ ಶಾಲಾ ಶಿಕ್ಷಕರು, ಮಕ್ಕಳ ಪೋಷಕರು ಉಪಸ್ಥಿತರಿದ್ದರು.