ಒಳಮೊಗ್ರು ಶಕ್ತಿ ಕೇಂದ್ರದಿಂದ ಮೋದಿ ಸರ್ಕಾರದ 8 ನೇ ವರ್ಷದ ಸಂಭ್ರಮಾಚರಣೆ, ಶೈಕ್ಷಣಿಕ ಸಾಧಕರಿಗೆ ಸನ್ಮಾನ

0

ಪುತ್ತೂರು: ಬಿಜೆಪಿ ಪುತ್ತೂರು ಗ್ರಾಮಾಂತರ ಮಂಡಲದ ಒಳಮೊಗ್ರು ಶಕ್ತಿ ಕೇಂದ್ರ ವತಿಯಿಂದ ಪ್ರದಾನ ಮಂತ್ರಿ  ನರೇಂದ್ರ ಮೋದಿ ಯವರ ಸರಕಾರ 8 ವರ್ಷ ಪೂರ್ಣಗೊಳಿಸಿದ ಸಂಭ್ರಚರಣೆಯ ಪ್ರಯುಕ್ತ ಸೇವೆ,ಸುಶಾಸನ,ಬಡವರ ಕಲ್ಯಾಣ ಕಾರ್ಯಕ್ರಮದಡಿ ಶೈಕ್ಷಣಿಕ ಸಾಧಕರಿಗೆ ಸನ್ಮಾನ ಕಾರ್ಯಕ್ರಮವನ್ನು 159 ನೇ ಬೂತ್ ನಲ್ಲಿ ಹಮ್ಮಿಕೊಳ್ಳಲಾಯಿತು. 10ನೆ ತರಗತಿಯ ಪಬ್ಲಿಕ್ ಪರೀಕ್ಷೆಯಲ್ಲಿ ಉತ್ತಮ ಅಂಕ ಪಡೆದ ಪ್ರತಿಭಾನ್ವಿತ ವಿದ್ಯಾರ್ಥಿಗಳಾದ ದನುಜಾ ಪರ್ಪುಂಜ 621 ಅಂಕ, ರಕ್ಷಾ ಕೆ ಆರ್ ಪರ್ಪುಂಜ 571 ಅಂಕ,.ಅನುಷಾ ಪಿ ಪರ್ಪುಂಜ 560 ಅಂಕ ಇವರನ್ನು ಗುರುತಿಸಿ ಸನ್ಮಾನಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಬಿಜೆಪಿ ಪುತ್ತೂರು ಗ್ರಾಮಾಂತರ ಮಂಡಲ ಪ್ರದಾನ ಕಾರ್ಯದರ್ಶಿ  ನಿತೀಶ್ ಕುಮಾರ್ ಶಾಂತಿವನ, ಶಕ್ತಿ ಕೇಂದ್ರ ಪ್ರಮುಖ  ರಾಜೇಶ್ ರೈ ಪರ್ಪುಂಜ, ಕುಂಬ್ರ ಸಿಎ ಬ್ಯಾಂಕ್ ಅಧ್ಯಕ್ಷ  ಪ್ರಕಾಶ್ಚಂದ್ರ ರೈ ಕೈಕಾರ,ಒಳಮೊಗ್ರು ಗ್ರಾಮ ಪಂಚಾಯತ್ ಅಧ್ಯಕ್ಷರಾದ ತ್ರಿವೇಣಿ ಪಲ್ಲತ್ತಾರು,ಬೂತ್ ಸಮಿತಿ ಅಧ್ಯಕ್ಷರಾದ  ರಾಕೇಶ್ ರೈ ಪರ್ಪುಂಜ, ಪ್ರದಾನ ಕಾರ್ಯದರ್ಶಿ  ರಾಜೇಶ್ ಪಿದಪಟ್ಲ ಹಾಗೂ ಕಾರ್ಯಕರ್ತರು ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here