ಪುತ್ತೂರು; ಕುಂಬ್ರ ಬದ್ರಿಯಾ ನಗರ ಬದ್ರಿಯಾ ಮದ್ರಸ ವಠಾರದಲ್ಲಿ ಮಳೆಗಾಲ ಪೂರ್ವ ಸ್ವಚ್ಚತಾಕಾರ್ಯ ಜೂ. 12 ರಂದು ನಡೆಯಿತು. ಮಳೆಗಾಲದಲ್ಲಿ ಹರಡುವ ಸಾಂಕ್ರಾಮಿಕ ರೋಗಗಳಾದ ಮಲೇರಿಯಾ, ಡೆಂಗ್ಯೂ ಸೇರಿದಂತೆ ಯಾವುದೇ ರೀತಿಯ ರೋಗಗಳು ಹರಡದಂತೆ ಮದ್ರಸ ವಠಾರದಲ್ಲಿ ಸ್ವಚ್ಚತಾಕಾರ್ಯ ನಡೆಸಲಾಯಿತು. ಸ್ವಚ್ಚತಾ ಕಾರ್ಯದಲ್ಲಿ ಜಮಾತ್ ಕಮಿಟಿ ಜೊತೆ ಕಾರ್ಯದರ್ಶಿ ಅಬ್ದುಲ್ರಹಿಮಾನ್ ಕೊಯಿಲ, ಅಬ್ದುಲ್ಲ ಕೊಯಿಲ, ಶರೀಫ್ ಮಗಿರೆ, ಹಸೈನಾರ್ ಮಗಿರೆ ಮತ್ತು ಶರೀಫ್ ಕುಯ್ಯಾರ್ ಭಾಗವಹಿಸಿದರು.