ನಿಡ್ಪಳ್ಳಿ; ರೆಂಜ ಘಾಟೆ ಬಿಲ್ಡಿಂಗ್ ಎದುರುಗಡೆ ರಸ್ತೆ ಬದಿಯಲ್ಲಿ ಇರುವ ವಿದ್ಯುತ್ ಕಂಬವೊಂದನ್ನು ಬಳ್ಳಿ ಆವರಿಸಿದ್ದು ನಾಗರಿಕರಿಗೆ ಭಯದ ವಾತಾವರಣ ಸೃಷ್ಟಿಯಾಗಿದೆ.
ಈ ಕಂಬ ಹೆಚ್.ಟಿ ಲೈನ್ ಹೊಂದಿದ್ದು ನೆಲದಿಂದ ಸುತ್ತಿ ಕೊಂಡ ಬಳ್ಳಿ ಇಡೀ ಕಂಬವನ್ನು ಮುಚ್ಚಿದ್ದು ಅಲ್ಲದೆ ಬಳ್ಳಿ ತಂತಿಯನ್ನು ಸುತ್ತಿ ಕೊಂಡಿದ್ದು ನೋಡುಗರನ್ನು ಭಯ ಪಡಿಸುವಂತಿದೆ.ಈ ಪರಿಸರ ಹೆಚ್ಚು ಜನ ನಿಬಿಡ ಪ್ರದೇಶವಾಗಿದೆ. ಬಳ್ಳಿ ಮುಟ್ಟಿದರೆ ಅಪಾಯ ಸಂಭವಿಸುವುದು ಗ್ಯಾರಂಟಿ ಎಂದು ನಾಗರಿಕರು ಭಯ ಪಡುತ್ತಿದ್ದು ತಕ್ಷಣ ಇಲಾಖೆ ಬಳ್ಳಿಯನ್ನು ತೆರವು ಗೊಳಿಸಿ ಬರುವ ಅಪಾಯವನ್ನು ತಪ್ಪಿಸಲಿ ಎಂದು ನಾಗರಿಕರ ಒತ್ತಾಯ.