ಪುತ್ತೂರು: 34 ನೆಕ್ಕಿಲಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ನೆಕ್ಕಿಲಾಡಿ ಗ್ರಾಮದ ಹಳೆ ಸೇತುವೆ ಬಳಿ ಕಸ ಬಿಸಾಡಿದ ವ್ಯಕ್ತಿಗೆ ಗ್ರಾಮ ಪಂಚಾಯತ್ ದಂಡ ವಿಧಿಸಿದ ಘಟನೆ ನಡೆದಿದೆ. ಕಸ ಬಿಸಾಡಿದ ವ್ಯಕ್ತಿಯನ್ನು ಉಪ್ಪಿನಂಗಡಿ ರಾಮನಗರ ನಿವಾಸಿ ಹಸನಬ್ಬ ಎಂಬವರ ಪುತ್ರ ಹೈದರ್ ಎಂದು ಸಿ.ಸಿ.ಟಿ.ವಿ. ಮೂಲಕ ಪತ್ತೆ ಮಾಡಿದ ಗ್ರಾ.ಪಂ.ಅಧ್ಯಕ್ಷ ಪ್ರಶಾಂತ್ ಎನ್. ಮತ್ತು ಪಿಡಿಓ ಕುಮಾರಯ್ಯರವರು ಹೈದರ್ ಅವರಿಗೆ 2500 ರೂ ದಂಡ ವಿಧಿಸಿದ್ದಾರೆ.