ಕಕ್ಕೂರು ಅಂಗನವಾಡಿ ಪುಟಾಣಿಗಳಿಗೆ ಬೀಳ್ಕೊಡುಗೆ-ನೀರಿನ ಫಿಲ್ಟರ್ ಕೊಡುಗೆ       

0

  ನಿಡ್ಪಳ್ಳಿ:  ಬೆಟ್ಟಂಪಾಡಿ ಗ್ರಾಮದ ಕಕ್ಕೂರು ಅಂಗನವಾಡಿಯಲ್ಲಿ ಪುಟಾಣಿಗಳಿಗೆ  ಬೀಳ್ಕೊಡುವ ಕಾರ್ಯಕ್ರಮ ಜೂ.10 ರಂದು ಪೋಷಕಿ ಸವಿತಾ ಬಾಲಕೃಷ್ಣ ಇವರ ಅಧ್ಯಕ್ಷತೆಯಲ್ಲಿ ನಡೆಯಿತು.

 ಅಲ್ಲದೆ ಪೋಷಣ ಅಭಿಯಾನ ಕಾರ್ಯಕ್ರಮದಲ್ಲಿ ಅರಸಿನ ಕುಂಕುಮ ಹಾಗೂ ಸೀಮಂತ ಕಾರ್ಯಕ್ರಮವನ್ನು ನಡೆಸಲಾಯಿತು. ಪುತ್ತೂರು ಎ.ಸಿ.ಡಿ.ಪಿ.ಓ  ಭಾರತಿ ಮತ್ತು ಬೆಟ್ಟಂಪಾಡಿ ಗ್ರಾಮ ಪಂಚಾಯತ್ ಉಪಾಧ್ಯಕ್ಷ ವಿನೋದ್ ರೈ ಗುತ್ತು ಇವರು ಜಂಟಿಯಾಗಿ ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿ ಮಕ್ಕಳಿಗೆ ಶುಭ ಹಾರೈಸಿದರು. ಬೀಳ್ಕೊಡುಗೆ ಗೊಂಡ ಮಕ್ಕಳಿಗೆ ಬೆಟ್ಟಂಪಾಡಿ ಗ್ರಾಮ ಪಂಚಾಯತ್ ಸದಸ್ಯರುಗಳಾದ   ಮೋಯಿದು ಕುಂಞ ಕೊನಡ್ಕ , ಮಹಾಲಿಂಗ ನಾಯ್ಕ, ಸುಮಲತಾ, ಲಲಿತಾ ಚಿದಾನಂದ ಇವರು  ಕೊಡೆಯನ್ನು ನೀಡಿ ಶುಭ ಹಾರೈಸಿದರು. ಪುರೋಹಿತರಾದ ರಾಧಾಕೃಷ್ಣ ಭಟ್ ಕಕ್ಕೂರು ಇವರು ಅಂಗನವಾಡಿ  ನೀರಿನ ಫಿಲ್ಟರ್  ಕೊಡುಗೆಯಾಗಿ ನೀಡಿದರು.

    ವೇದಿಕೆಯಲ್ಲಿ ವಲಯ ಮೇಲ್ವಿಚಾರಕಿ  ಹರಿಣಾಕ್ಷಿ, ಆರೋಗ್ಯ ಸಹಾಯಕಿ ಯಶೋಧ, ಕಕ್ಕೂರು ಶಾಲಾ ಮುಖ್ಯಗುರು ಜ್ಯೋತಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಅಂಗನವಾಡಿ ಪುಟಾಣಿಗಳು ಪ್ರಾರ್ಥಿಸಿ ಶಾಲಿನಿ ಸ್ವಾಗತಿಸಿ, ಚಂದ್ರಾವತಿ ವಂದಿಸಿದರು. ಸ್ತ್ರೀಶಕ್ತಿ ಸದಸ್ಯರು ಹಾಗೂ ಮಕ್ಕಳ ಹೆತ್ತವರು ಪಾಲ್ಗೊಂಡರು. ಅಂಗನವಾಡಿ ಕಾರ್ಯಕರ್ತೆ ಶ್ಯಾಮಲಾ ಎಂ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here