ದ.ಕ ಜೇನು ವ್ಯವಸಾಯಗಾರರ ಸಹಕಾರ ಸಂಘದ 84 ನೇ ವಾರ್ಷಿಕ ಮಹಾಸಭೆ : ರೂ.25.78 ಲಾಭ, ಶೇ.15 ಡಿವಿಡೆಂಡ್

0

ಪುತ್ತೂರು; ದ.ಕ ಜೇನು ವ್ಯವಸಾಯಗಾರರ ಸಹಕಾರ ಸಂಘವು 2021-22ನೇ ಸಾಲಿನಲ್ಲಿ ರೂ.309.20 ಲಕ್ಷ ವಾರ್ಷಿಕ ವ್ಯವಹಾರ ನಡೆಸಿ ರೂ.25,78,720-23 ನಿವ್ವಳ ಲಾಭಗಳಿಸಿದೆ. ಸದಸ್ಯರಿಗೆ ಶೇ.15 ಡಿವಿಡೆಂಡ್ ವಿತರಿಸಲಾಗುವುದು ಎಂದು ಸಂಘದ ಅಧ್ಯಕ್ಷ ಚಂದ್ರ ಕೋಲ್ಚಾರ್ ರವರು ವಾರ್ಷಿಕ ಮಹಾಸಭೆಯಲ್ಲಿ ಘೋಷಣೆ ಮಾಡಿದರು.


ಸಂಘದ 84 ನೇ ವಾರ್ಷಿಕ ಮಹಾಸಭೆಯು ಜೂ.14 ರಂದು ಸಂಘದ ಮಾಧರಿ ಸೌಧ ಸಭಾಂಗಣದಲ್ಲಿ ನಡೆಯಿತು. ವರದಿ ವರ್ಷದಲ್ಲಿ ಸಂಘವು 2948 ಸದಸ್ಯರಿದ್ದು ರೂ.11,79,900 ಪಾಲು ಬಂಡವಾಳ ಹೊಂದಿದೆ. 7670 ಜೇನು ವ್ಯವಸಾಯಗಾರರನ್ನು ಹೊಂದಿದೆ. 36,122 ಜೇನು ಕುಟುಂಬಗಳನ್ನು ಮಾರಾಟ ಮಾಡಲಾಹಿದೆ. 1,31,154 ಕೆ.ಜಿ ಜೇನನ್ನು ಉತ್ಪಾದಕರಿಂದ ಖರೀದಿಸಿ 1,24,096 ಕೆ.ಜಿ ಜೇನು ಮಾರಾಟ ಮಾಡಿ ವಾರ್ಷಿಕವಾಗಿ ರೂ.309.20 ಲಕ್ಷ‌ ವ್ಯವಹಾರ ಮಾಡಿ ರೂ.25.78 ಲಕ್ಷ ಲಾಭ ಗಳಿಸಿ, ಲೆಕ್ಕಪರಿಶೋಧನೆಯಲ್ಲಿ ಎ ಶ್ರೇಣಿಯನ್ನು ಪಡೆದುಕೊಂಡಿದೆ ಎಂದರು.

ಜೇನು ಚಾಕಲೇಟ್ ಶೀಘ್ರ ಮಾರುಕಟ್ಟೆಗೆ;

ಜೇನು ಮಾರುಕಟ್ಟೆಯಲ್ಲಿ ಭಾರಿ ಪೈಪೋಟಿ ಎದುರಾಗಿದ್ದು ಸಮತೋಲನ ಕಾಯ್ದುಕೊಳ್ಳಲು ನೂತನ ವಿನ್ಯಾಸ ಬಾಟಲಿಗಳನ್ನು ಹೊರತರಲು ನಿರ್ಧರಿಸಲಾಗಿದೆ. ಜೇನಿನ ನಾಲ್ಕು ವಿಧದ ಚಾಕಲೇಟ್ ತಯಾರಿಸಲು ಸಿದ್ಧತೆಗಳನ್ನು ನಡೆಯುತ್ತಿದ್ದು ಶೀಘ್ರದಲ್ಲೇ ಮಾರುಕಟ್ಟೆಗೆ ಬಿಡುಗಡೆಯಾಗಲಿದೆ. ವ್ಯವಸಾಯಗಾರರಿಗೆ ಪ್ರತಿ ಕೆ.ಜಿಗೆ ದರ ರೂ.10 ಏರಿಕೆ ಮಾಡಲಾಗಿದೆ. ಸುಳ್ಯ ಶಾಖೆಗೆ ಸುಮಾರು ರೂ.50 ಲಕ್ಷದಲ್ಲಿ ಸುಸಜ್ಜಿತ ಕಟ್ಟಡ ನಿರ್ಮಾಣಗೊಳ್ಳುತ್ತಿದೆ. ನೂತನ ಮಾದರಿಯ ಸಂಸ್ಕರಣಾ ಘಟಕ, ಪ್ರಯೋಗಾಲಯ ಹಾಗೂ ಪ್ಯಾಕಿಂಗ್ ವ್ಯವಸ್ಥೆಯನ್ನು ಮಾಡುವುದಾಗಿ ನಿರ್ಧರಿಸಲಾಗಿದೆ. ಸಂಘದ ವೆಬ್ ಸೈಟ್ ನ್ನು ವ್ಯವಸ್ಥಿತವಾಗಿ ರಚಿಸಿ
ಮರು ಬಿಡುಗಡೆ ಮಾಡಲಾಗುವುದು ಹಾಗೂ ಆನ್ ಲೈನ್ ನಲ್ಲಿ ಜೇನು ಮಾರಾಟಕ್ಕೆ ಚಿಂತನೆ ನಡೆಸಲಾಗಿದೆ ಎಂದು ಅಧ್ಯಕ್ಷ ಚಂದ್ರ‌ ಕೋಲ್ಚಾರ್ ತಿಳಿಸಿದರು.

ಬಹುಮಾನ ವಿತರಣೆ;

ವರದಿ ವರ್ಷದಲ್ಲಿ ಸಂಘಕ್ಕೆ ಅತೀ ಹೆಚ್ಚು ಜೇನು ನೀಡಿದ ಮನಮೋಹನ ಅರಂಬ್ಯ, ಚೆನ್ನಕೇಶವ ಪೊಯ್ಯೆಮಜಲು, ವೆಂಕಟೇಶ ಪ್ರಸಾದ್, ಶಿವಾನಂದ ಉಜಿರೆ, ಪುಟ್ಟಣ್ಣ ಗೌಡ, ಬಶೀರ್ ಎಂ. ದುಗ್ಗಲಡ್ಕ, ಹರೀಶ್ ಕೋಡ್ಲ, ದೇವದಾಸ್ ಮುದ್ರಾಡಿ, ಚಂದ್ರಶೇಖರ ಗೌಡ, ಮಂಜಪ್ಪ ಎನ್ ಉಬರಡ್ಕ, ರಾಧಾಕೃಷ್ಣ ದಾಸ್ ಉಬರಡ್ಕ, ವಿಜಯ ಕುಮಾರ್ ಬಾಳೆಕಲ್ಲು, ದಿನೇಶ ಅರಂಬ್ಯ, ಹರಿಪ್ರಸಾದ್ ಉಬರಡ್ಕ ಹಾಗೂ ಸುರೇಶ್ ರೈ ಇರ್ದೆಯವರಿಗೆ ಬಹುಮಾನ ವಿತರಿಸಲಾಯಿತು. ಸಂಘದಿಂದ ಅತೀ ಹೆಚ್ಚು ಜೇನು ಖರೀದಿ ಮಾಡಿದ ಕರುಣಾಕರ ಹಿರಿಯಡ್ಕ ಉಡುಪಿ, ಮಧುಪ್ರಪಂಚದ ಸಂಪಾದಕರಾದ ನಾರಾಯಣ ರೈ ಕುಕ್ಕುವಳ್ಳಿ ಹಾಗೂ ಜಯಾನಂದ ಪೆರಾಜೆಯವರನ್ನು ಗೌರವಿಸಲಾಯಿತು.

ನಿರ್ದೇಶಕರಾದ ಜಿ.ಪಿ. ಶ್ಯಾಮ ಭಟ್, ಜನಾರ್ದನ ಚೂಂತಾರು, ಡಿ.ತನಿಯಪ್ಪ, ಶ್ರೀಶ ಕೊಡವೂರು, ಎಚ್.ಸುಂದರ ಗೌಡ, ಇಂದಿರಾ ಕೆ., ಹರೀಶ್ ಕೋಡ್ಲ, ಪಾಂಡುರಂಗ ಹೆಗ್ಡೆ, ಪುರುಷೋತ್ತಮ ಭಟ್ ಎಂ., ಶಿವಾನಂದ, ಮನಮೋಹನ ಎ., ಪುಟ್ಟಣ್ಣ ಗೌಡ ಕೆ., ಗೋವಿಂದ ಭಟ್ ಪಿ., ಶ್ರೀಶಂಕರ ಪಿ., ಸರಸ್ವತಿ ವೈ.ಪಿ., ಸುಶೀಲ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಸಂಘದ ಅಧ್ಯಕ್ಷ ಚಂದ್ರ ಕೋಲ್ಚಾರ್ ಸ್ವಾಗತಿಸಿದರು. ವ್ಯವಸ್ಥಾಪನಾ ನಿರ್ದೇಶಕ ತಿಮ್ಮಯ್ಯ ಪಿಂಡಿಮನೆ ಬರದಿ, ಲೆಕ್ಕಪತ್ರ ಮಂಡಿಸಿದರು. ಸಿಬಂದಿಗಳಾದ ಕೇಶವಕೃಷ್ಣ ಶರ್ಮಾ ಬಿ. ಬಹುಮಾನ ವಿಜೇತರ ಪಟ್ಟಿ ಓದಿದರು. ದಕ್ಷಿತಾ ಬಿ.ಕೆ ಪ್ರಾರ್ಥಿಸಿದರು. ಜಯಾನಂದ‌ ಜಿ., ಆಶಾ ಕೆ., ಚೈತ್ರ ಎಸ್., ಪುನೀತ್, ಶೀನಪ್ಪ ಗೌಡ ಹಾಗೂ ಲೋಕೇಶ್ ಸಹಕರಿಸಿದರು. ಉಪಾಧ್ಯಕ್ಷ ರಾಜಾರಾಮ ಶೆಟ್ಟಿ ಕೋಲ್ಪೆಗುತ್ತು ವಂದಿಸಿದರು.

LEAVE A REPLY

Please enter your comment!
Please enter your name here