ರಸ್ತೆ ದುರಸ್ಥಿಗಾಗಿ ರೈಲ್ವೆ ಇಲಾಖೆಗೆ ಬರೆಯಲು ನಿರ್ಣಯ: ಬೆಳಂದೂರು ಗ್ರಾ.ಪಂ.ಸಾಮಾನ್ಯ ಸಭೆ

0

ಕಾಣಿಯೂರು: ಬೆಳಂದೂರು ಗ್ರಾಮ ಪಂಚಾಯತ್ ಸಾಮಾನ್ಯ ಸಭೆಯು ಗ್ರಾ.ಪಂ. ಅಧ್ಯಕ್ಷರಾದ ಲೋಹಿತಾಕ್ಷ ಕೆಡೆಂಜಿಕಟ್ಟ ಅವರ ಅಧ್ಯಕ್ಷತೆಯಲ್ಲಿ ಗ್ರಾ.ಪಂ.ಸಭಾಂಗಣದಲ್ಲಿ ನಡೆಯಿತು.

 ಬೆಳಂದೂರು ಗ್ರಾಮದ ಕಾಣಿಯೂರು ಸಮೀಪ ರೈಲ್ವೆ ಸೇತುವೆಯ ಕೆಳಭಾಗದಲ್ಲಿ ರಸ್ತೆಯ ಹೊಳೆಯ ಬದಿ ಮಳೆಯಿಂದ ರಸ್ತೆಯು ಜರಿದು ಹೋಗಿರುವುದರಿಂದ ದುರಸ್ಥಿಗಾಗಿ ರೈಲ್ವೆ ಇಲಾಖೆಗೆ ಬರೆಯುವಂತೆ ಸಭೆಯಲ್ಲಿ ನಿರ್ಣಯಿಸಲಾಯಿತು. 2022-23ನೇ ಸಾಲಿನ ಕ್ರೀಯಾ ಯೋಜನೆಯನ್ನು ಜೂ. 16ರಂದು ನಡೆಸುವ ಕುರಿತು ಸಭೆಯಲ್ಲಿ ನಿರ್ಣಯಿಸಲಾಯಿತು. ವಸತಿ ಯೋಜನೆಯ ಆದೇಶ ಪ್ರತಿ ಸಿಕ್ಕಿದ ಫಲಾನುಭವಿಗಳಿಗೆ ಜೂ.16ರಂದು ಮೀಟಿಂಗ್ ಮಾಡಿ ಮನೆ ಕಟ್ಟಲು ಕೊಡ ಬೇಕಾದ ದಾಖಲೆಗಳ ಬಗ್ಗೆ ತಿಳಿಯಪಡಿಸುವುದು ಮತ್ತು ಮನೆ ಕಟ್ಟುವ ಬಗ್ಗೆ ಮಾಹಿತಿಯನ್ನು ನೀಡಲು ಸಭೆ ನಡೆಸುವಂತೆ ನಿರ್ಣಯಿಸಲಾಯಿತು.

ಗ್ರಾ.ಪಂ. ಉಪಾಧ್ಯಕ್ಷೆ ತೇಜಾಕ್ಷಿ ಕೊಡಂಗೆ, ಸದಸ್ಯರಾದ ವಿಠಲ ಗೌಡ ಅಗಳಿ, ಪ್ರವೀಣ್ ಕೆರೆನಾರು, ಜಯರಾಮ ಬೆಳಂದೂರು, ಜಯಂತ ಅಬೀರ, ಉಮೇಶ್ವರಿ ಅಗಳಿ, ಗೀತಾ ಕುವೆತ್ತೋಡಿ, ಹರಿಣಾಕ್ಷಿ ಬನಾರಿ, ಪಾರ್ವತಿ ಮರಕ್ಕಡ, ಕುಸುಮಾ ಅಂಕಜಾಲು, ತಾರಾ ಅನ್ಯಾಡಿ, ಗೌರಿ ಮಾದೋಡಿ ಉಪಸ್ಥಿತರಿದ್ದು, ಚರ್ಚೆಯಲ್ಲಿ ಪಾಲ್ಗೊಂಡರು. ಸಿಬ್ಬಂದಿ ಗೀತಾರವರು ಸರಕಾರದ ಸುತ್ತೋಲೆ, ಸಾರ್ವಜನಿಕ ಅರ್ಜಿಗಳನ್ನು ಓದಿದರು. ಪ್ರಭಾರ ಪಂಚಾಯತ್ ಅಭಿವೃದ್ಧಿ ಅಧಿಕಾರಿ ನಾರಾಯಣರವರು ಸಭೆ ನಿರ್ವಹಿಸಿದರು. ಸಿಬ್ಬಂದಿಗಳಾದ ಹರ್ಷಿತ್ ಕೂರ, ಮಮತಾ, ಸಂತೋಷ್‌ರವರು ಸಹಕರಿಸಿದರು.

LEAVE A REPLY

Please enter your comment!
Please enter your name here