ಪುತ್ತೂರಿನ ಸುದಾನ ವಸತಿ ಶಾಲೆಯಲ್ಲಿಜೂನ್ 14 ರಂದು ನೂತನ ಶೈಕ್ಷಣಿಕ ವರ್ಷದಚುನಾವಣೆಯುಚುನಾವಣಾ ನಿಯಮಗಳಿಗನುಸಾರವಾಗಿ ವಿಶೇಷ ತಾಂತ್ರಿಕ ಮತದಾನ ವಿಧಾನದಿಂದನಡೆಯಿತು. 5 ರಿಂದ 10ನೇ ತರಗತಿಯವರೆಗಿನ ಮಕ್ಕಳು ಮತಚಲಾಯಿಸುವ ಮೂಲಕ ವಿದ್ಯಾರ್ಥಿ ನಾಯಕರನ್ನು ಆರಿಸಿದರು. ವಿದ್ಯಾರ್ಥಿನಾಯಕನಾಗಿ ಸನ್ವರ್ಯ ಎ ಎಸ್ (೧೦), ಸೃಷ್ಟಿ (೧೦) ಉಪನಾಯಕಿಯಾಗಿ, ಇಶಿತಾ ಎಸ್ ನಾಯರ್ (೯), ಕಾರ್ಯದರ್ಶಿಯಾಗಿ, ಲಿಶೋನ್ ಮಿರಾಂಡ (೧೦) ವಿರೋಧಪಕ್ಷದ ನಾಯಕನಾಗಿಆಯ್ಕೆಯಾಗಿರುತ್ತಾರೆ.ಸಹಶಿಕ್ಷಕರಾದ ಅಶ್ವಿನಿ, ಹರ್ಷಿತಾ ನಾಕ್, ಯೋಗಿತಾ, ದಿವ್ಯಾ, ಸುಂದರ್ ನಾವೂರ್, ಪುಷ್ಪರಾಜ್ರವರು ಚುನಾವಣಾಧಿಕಾರಿಗಳಾಗಿ ಕಾರ್ಯನಿರ್ವಹಿಸಿದರು. ಶಾಲಾ ಮುಖ್ಯಶಿಕ್ಷಕಿ ಶೋಭಾನಾಗರಾಜ್ರವರುಚುನಾವಣೆಯ ಮಹತ್ವ, ಮತಾಂಕಕ್ಕಿರುವ ಮೌಲ್ಯದಕುರಿತಾಗಿ ವಿವರಿಸಿ ಮತದಾರರಿಗಿರಬೇಕಾದ ಹೊಣೆಯನ್ನುಅರಿತುಸತ್ಪ್ರಜೆಗಳಾಗುವಂತೆ ಕರೆನೀಡಿದರು. ಸುದಾನಸ್ಕೌಟ್ಸ್ ವಿದ್ಯಾರ್ಥಿಗಳು ಮತಗಟ್ಟೆಯ ಸುವ್ಯಸ್ಥೆಗಾಗಿ ಸಹಕರಿಸಿದರು. ಸುದಾನ ಸೋಶಿಯಲ್ ಕ್ಲಬ್’ಜಾಗೃತಿ’ ಈ ಕಾರ್ಯಕ್ರಮವನ್ನು ಆಯೋಜಿಸಿತ್ತು