ಜೂ. 16 ರಂದು ಪಟ್ಟೆ ವಿದ್ಯಾಸಂಸ್ಥೆಗಳ ಕ್ರೀಡಾಂಗಣದಲ್ಲಿ ಸೀನಿಯರ್ ರಾಷ್ಟ್ರೀಯ ತ್ರೋಬಾಲ್ ತರಬೇತಿ

0

ಬಡಗನ್ನೂರು:  ತ್ರೋಬಾಲ್ ಅಸೋಸಿಯೇಶನ್ ಆಫ್ ಕರ್ನಾಟಕ ರಾಜ್ಯ ತಂಡದ 45 ನೇ ಸೀನಿಯರ್ ರಾಷ್ಟ್ರೀಯ ತ್ರೋಬಾಲ್ ತರಬೇತಿ ಶಿಬಿರವು ಜೂ. 16 ರಂದು ಬೆಳಗ್ಗೆ ಗಂ 10.30 ಕ್ಕೆ ಪಟ್ಟೆ ವಿದ್ಯಾಸಂಸ್ಥೆಗಳ ಕ್ರೀಡಾಂಗಣದಲ್ಲಿ ನಡೆಯಲಿದೆ. ಕಾರ್ಯಕ್ರಮವು  ಪಟ್ಟೆ ವಿದ್ಯಾಸಂಸ್ಥೆಗಳ ಅಧ್ಯಕ್ಷ    ವೇಣುಗೋಪಾಲ್ ಪಿ , ರವರ  ಅಧ್ಯಕ್ಷತೆಯಲ್ಲಿ ನಡೆಯಲಿದೆ.

ವಿದ್ಯಾಸಂಸ್ಥೆಗಳ ಸಂಚಾಲಕ ಪಿ.ನಾರಾಯಣ ಭಟ್‌, ಬೀರ್ನೋಡಿ ಉದ್ಘಾಟನೆ  ಮಾಡಲ್ಲಿದ್ದಾರೆ. ಮುಖ್ಯ ಅತಿಥಿಗಳಾಗಿ  ಪುತ್ತೂರು ಉಪ ವಿಭಾಗ, ಡಿ.ವೈ.ಎಸ್. ಪಿ. ಗಾನ. ಪಿ. ಕುಮಾರ್,  ಪುತ್ತೂರು ಅಕ್ಷಯ ಗ್ರೂಪ್  ಅಧ್ಯಕ್ಷ .ಜಯಂತ ನಡುಬೈಲು, ಪುತ್ತೂರು ಜನ್ಮ ಫೌಂಡೇಶನ್ (ರಿ) ನ ಅಧ್ಯಕ್ಷ ಹರ್ಷ ಕುಮಾರ್ ರೈ ಮಾಡಾವು, .ಪುತ್ತೂರು ವಿದ್ಯಾಮಾತಾ ಅಕಾಡಮಿ .ಆಡಳಿತ ನಿರ್ದೇಶಕ ಭಾಗ್ಯಶ್ ಕೆದಂಬಾಡಿ ಗ್ರಾ.ಪಂ ಅಧ್ಯಕ್ಷ ರತನ್ ರೈ ಕುಂಬ್ರ, ನಿವೃತ್ತ ಮುಖ್ಯ ಶಿಕ್ಷಕ  ವೈ.ಕೆ.ನಾಯ್ಕ ಪಟ್ಟೆ, ಕುಂಬ್ರ ಕರ್ನಾಟಕ ಪಬ್ಲಿಕ್ ಸ್ಕೂಲ್ ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕ ಜಯರಾಮ ಗೌಡ , ಈಶ್ವರಮಂಗಲ ಗಜಾನನ ವಿದ್ಯಾ ಸಂಸ್ಥೆಗಳ  ನಿರ್ದೇಶಕ ಶಿವರಾಮ್ ಭಟ್ ಬೀರ್ನಕಜೆ, , ಅರಿಯಡ್ಕ ಅರಣ್ಯ ಸಮಿತಿ .ಅಧ್ಯಕ್ಷ ಲೋಕೇಶ್ ರೈ, ಅಮೈ ಭಾಗವಹಿಸಲ್ಲಿದ್ದಾರೆ..

LEAVE A REPLY

Please enter your comment!
Please enter your name here