ನೆಕ್ಕಿಲಾಡಿ ಗ್ರಾಮ ಪಂಚಾಯತಿನಲ್ಲಿ 34 ಲಕ್ಷ ರೂ ಉಳಿಕೆಯಾಗಿಲ್ಲ: ಅಧ್ಯಕ್ಷರ ಸ್ಪಷ್ಟನೆ

0

ಪುತ್ತೂರು: 15ನೇ ಹಣಕಾಸು ಯೋಜನೆಯಡಿ ತಾಲೂಕಿನ ಗ್ರಾಮ ಪಂಚಾಯತಿಗಳಲ್ಲಿ ರೂ 6.59 ಕೋಟಿ ಖರ್ಚಾಗದೆ ಉಳಿದಿರುವ ವಿಚಾರಕ್ಕೆ ಸಂಬಂಧಿಸಿ ಪುತ್ತೂರು ತಾ.ಪಂ.ಸಭಾಂಗಣದಲ್ಲಿ ಜೂನ್ 14ರಂದು ಶಾಸಕರ ಅಧ್ಯಕ್ಷತೆಯಲ್ಲಿ ನಡೆದ ಗ್ರಾ.ಪಂ. ಅಭಿವೃದ್ಧಿ ಪರಾಮರ್ಶೆಗಾಗಿ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಅಭಿವೃದ್ಧಿ ಅಧಿಕಾರಿಗಳ ಸಭೆಯಲ್ಲಿ ವಿವಿಧ ಗ್ರಾಮ ಪಂಚಾಯತಿಗಳಲ್ಲಿ ಹಣ ಖರ್ಚಾಗದೆ ಉಳಿಕೆಯಾಗಿರುವ ಬಗ್ಗೆ ಪ್ರಸ್ತಾಪವಾಗಿದೆ. 34 ನೆಕ್ಕಿಲಾಡಿ ಗ್ರಾಮ ಪಂಚಾಯತಿಯಲ್ಲಿ 35 ಲಕ್ಷ ರೂ ಖರ್ಚಾಗದೆ ಉಳಿಕೆಯಾಗಿದೆ ಎಂದು ಸಭೆಯಲ್ಲಿ ಪ್ರಸ್ತಾಪವಾಗಿದ್ದು ಪತ್ರಿಕೆಯಲ್ಲಿಯೂ ಅದೇ ರೀತಿ ಪ್ರಕಟವಾಗಿದೆ. ಸಿಬ್ಬಂದಿಗಳು ಅಂಕಿ ಅಂಶ ನಮೂದಿಸಿದಾಗ ತಪ್ಪಾಗಿ ಮುದ್ರಣ ತಪ್ಪಾಗಿದ್ದರಿಂದ ಈ ರೀತಿ ಉಲ್ಲೇಖ ಆಗಿರಬಹುದು. ನಮ್ಮ ಪಂಚಾಯತಿನಲ್ಲಿ 34 ಲಕ್ಷ ರೂ ಉಳಿಕೆಯಾಗಿಲ್ಲ. 16 ಲಕ್ಷ ರೂ ಉಳಿಕೆಯಾಗಿದ್ದು ಅದರಲ್ಲಿ 12 ಲಕ್ಷ ರೂ ಕಾಮಗಾರಿ ಮತ್ತು ಕುಡಿಯುವ ನೀರಿನ‌ ಕಾಮಗಾರಿ ಆಗಿದೆ.‌ ಗುತ್ತಿಗೆದಾರರು ಬಿಲ್ ನೀಡದ ಕಾರಣ ಬಿಲ್‌ ಪಾವತಿ ಬಾಕಿ ಇದೆ ಎಂದು ಗ್ರಾ.ಪಂ.ಅಧ್ಯಕ್ಷ ಪ್ರಶಾಂತ್ ಎನ್. ಸ್ಪಷ್ಟನೆ ನೀಡಿದ್ದಾರೆ.

LEAVE A REPLY

Please enter your comment!
Please enter your name here