ಆಲಂಕಾರು ದ.ಕ.ಜಿ.ಪ ಹಿ.ಪ್ರಾ ಶಾಲೆಯಲ್ಲಿ ಶಿಕ್ಷಕರಿಗೆ ಬಿಳ್ಕೋಡಿಗೆ ಕಾರ್ಯಕ್ರಮ

0

ಆಲಂಕಾರು: ದ.ಕ.ಜಿ.ಪ.ಹಿರಿಯ ಪ್ರಾಥಮಿಕ ಆಲಂಕಾರಿನಲ್ಲಿ ಪದೋನ್ನತಿ ಹೊಂದಿ ವರ್ಗಾವಣೆಗೊಂಡ ಶಿಕ್ಷಕರಿಗೆ ಬೀಳ್ಕೊಡುಗೆ ಹಾಗು ಸನ್ಮಾನ ಕಾರ್ಯಕ್ರಮ
ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆ ಅಲಂಕಾರು ನಲ್ಲಿ ನಡೆಯಿತು.ಇಲ್ಲಿ ಹಲವಾರು ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದ ಜಯಶ್ರೀ ಎಸ್ , ಜನಾರ್ಧನ ಗೌಡ ಕೆ. ಕಮಲ ಕೆ. ಇವರುಗಳು ಪದೋನ್ನತಿ ಹೊಂದಿ ನೇರ್ಲ, ಗಂಡಿಬಾಗಿಲು ಹಾಗೂ ಸರ್ವ ಶಾಲೆಗಳಿಗೆ ವರ್ಗಾವಣೆಗೊಂಡಿರುವ ಶಿಕ್ಷಕ,ಶಿಕ್ಷಕಿಯರಿಗೆ ಶಾಲಾ ಶಿಕ್ಷಕರು, ಎಸ್.ಡಿ.ಎಂ.ಸಿ ಮತ್ತು ಪೋಷಕರ ವತಿಯಿಂದ ಅವರನ್ನು ಸನ್ಮಾನಿಸಿ ಬೀಳ್ಕೊಡಲಾಯಿತು.

ಶ್ರೀ ಕ್ಷೇತ್ರ ಶರವೂರು ದುರ್ಗಾಪರಮೇಶ್ವರಿ ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಮಾಜಿ ಅಧ್ಯಕ್ಷರಾದ ಗೋಪಾಲಕೃಷ್ಣ ಪಡ್ಡಿಲ್ಲಾಯ, ಆಲಂಕಾರು ಮೂರ್ತೆದಾರ ಸೇವ ಸಹಕಾರಿ ಸಂಘದ ಮುತ್ತಪ್ಪ ಪೂಜಾರಿ ನೈಯ್ಯಲ್ಗ, ಕಡಬ ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರಾದ ರಾಮಕೃಷ್ಣ ಮಲ್ಲಾರ ರವರು ಭಡ್ತಿ ಗೊಂಡು ವರ್ಗಾವಣೆ ಗೊಂಡ ಶಿಕ್ಷಕರಿಗೆ ಶಾಲು ಹೊದಿಸಿ ಫಲಪುಷ್ಪ ನೀಡಿ ಗೌರವಿಸಿದರು. ಗ್ರಾಮ ಪಂಚಾಯಿತಿ ಸದಸ್ಯರಾದ ರವಿ ಪೂಜಾರಿ. ಅಲಂಕಾರು ಕ್ಲಸ್ಟರ್ ಸಮೂಹ ಸಂಪನ್ಮೂಲ ವ್ಯಕ್ತಿ ಪ್ರಕಾಶ್ .ಬಿ ಅತಿಥಿಗಳಾಗಿ ಭಾಗವಹಿಸಿದ್ದರು.

ಎಸ್.ಡಿ ಎಂ.ಸಿ ಅಧ್ಯಕ್ಷರಾದ ದಯಾನಂದ ಕರ್ಕೇರ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಶಾಲಾ ಮುಖ್ಯಗುರುಗಳಾದ ನಿಂಗರಾಜು ಕೆ.ಪಿ ಸ್ವಾಗತಿಸಿದರು.

ಎಸ್.ಡಿ.ಎಂ.ಸಿ ಸದಸ್ಯರಾದ ಎ.ಬಿ ಸುಂದರ, ಅಬೂಬಕ್ಕರ್ ನಕ್ಕರೆ , ದಿನೇಶ್ ದೇವಾಡಿಗ, ಹರೀಶ್ ಗೌಡ ನೆಕ್ಕರೆ, ವಿನುತಾ , ಸೌಮ್ಯ ಕಮಲ, ಮೋಹಿನಿ , ವಿಜಯಲಕ್ಷ್ಮಿ ನಸೀಮಾ, ಶಿಕ್ಷಕ,ಶಿಕ್ಷಕಿಯರಾದ ವನಜ, ವಿಶ್ವ ನಾಯ್ಕ ಅತಿಥಿ ಶಿಕ್ಷಕರಾದ ವನಿತಾ , ಪ್ರತಿಮಾ ರೋಶನಿ , ಜ್ಯೋತಿ ರಮ್ಯ, ಅಖಿಲ ಹಾಗೂ ಪೂರ್ವ ಪ್ರಾಥಮಿಕ ವಿಭಾಗದ ಶಿಕ್ಷಕಿಯರಾದ ಅಶ್ವಿನಿ ಕುಮಾರಿ ,ವಾಣಿಶ್ರೀ ಕಾರ್ಯಕ್ರಮದಲ್ಲಿ ಸಹಕರಿಸಿದರು. ಶಿಕ್ಷಕಿ ಸುಪ್ರಭಾ ಕಾರ್ಯಕ್ರಮ ನಿರೂಪಿಸಿ,ಶಿಕ್ಷಕರಾದ ಜಯಪ್ರಕಾಶ್ ಜಿ.ಪಿ ಧನ್ಯವಾದ ಸಮರ್ಪಿಸಿದರು.

LEAVE A REPLY

Please enter your comment!
Please enter your name here