ಉಪ್ಪಿನಂಗಡಿ ಮಾಂಡೋವಿ ಮೋಟಾಸ್೯ ನಲ್ಲಿ ರಕ್ತದಾನ ಶಿಬಿರ

0

 

ಪುತ್ತೂರು:ಮಾಂಡೋವಿ ಮೋಟರ‍್ಸ್ ಪ್ರೆöÊ.ಲಿ ಉಪ್ಪಿನಂಗಡಿ ಶಾಖೆಯಲ್ಲಿ ಮಾಂಡೋವಿ ಸಂಸ್ಥೆಯ ಚೇರ್‌ಮ್ಯಾನ್ ಆರೂರ್ ಕಿಶೋರ್ ರಾವ್‌ರವರ ೭೦ನೇ ವರ್ಷದ ಸಂಭ್ರಮಾಚರಣೆ ಹಾಗೂ ಮಾಂಡೋವಿ ಉಪ್ಪಿನಂಗಡಿ ಶಾಖೆಯ ಹನ್ನೊಂದನೆಯ ವರ್ಷದ ಪಾದಾರ್ಪಣೆಯ ಪ್ರಯುಕ್ತ ರೋಟರಿ ಕ್ಯಾಂಪ್ಕೋ ಬ್ಲಡ್ ಸೆಂಟರ್ ಸಹಯೋಗದೊಂದಿಗೆ ರಕ್ತದಾನ ಶಿಬಿರ ಜೂನ್.೧೭ ರಂದು ನಡೆಯಿತು.

 

 


ಪುತ್ತೂರು ಸುಶಾ ಡೆಕೋರ್ ಮಾಲಕರಾದ ರಕ್ಷಿತ್ ಜೈನ್ ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು.ಹಿರೆಬಂಡಾಡಿಯ ಪ್ರಗತಿಪರ ಕೃಷಿಕ ಯತೀಶ್ ಶೆಟ್ಟಿ ಮುಖ್ಯ ಅತಿಥಿಯಾಗಿ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.ಮುಖ್ಯ ಅತಿಥಿಯಾಗಿದ್ದ ರೋಟರಿ ಕ್ಯಾಂಪ್ಕೋ ಬ್ಲಡ್ ಬ್ಯಾಂಕ್ ಪುತ್ತೂರಿನ ಡಾ.ರಾಮಚಂದ್ರ ಭಟ್ ಮಾತನಾಡಿ ವ್ಯವಹಾರದೊಂದಿಗೆ ಸಮಾಜದ ನೋವಿಗೆ ಸ್ಪಂದಿಸುತ್ತಿರುವ ಮಾಂಡೋವಿ ಮೋಟರ‍್ಸ್ ಸಿಬ್ಬಂದಿಗಳ ಕಾರ್ಯ ಶ್ಲಾಘನೀಯ.ದಾನಗಳಲ್ಲಿ ರಕ್ತದಾನ ಶ್ರೇಷ್ಠ ದಾನ ಇಂತಹ ಕಾರ್ಯಗಳು ಇನ್ನಷ್ಟು ಮುಂದುವರೆಯಲಿ ಎಂದು ಹೇಳಿದರು.ಬೆಳಗ್ಗೆ ೧೦ ರಿಂದ ಮಧ್ಯಾಹ್ನ ೧ ರವರೆಗೆ ನಡೆದ ರಕ್ತದಾನ ಶಿಬಿರದಲ್ಲಿ ಮಾಂಡೋವಿ ಮೋಟರ‍್ಸ್ ಸಿಬ್ಬಂದಿಗಳು ಹಾಗೂ ಗ್ರಾಹಕರು ಸೇರಿ ಒಟ್ಟು ೫೫ ಜನ ರಕ್ತದಾನ ಮಾಡಿದರು.ವೇದಿಕೆಯಲ್ಲಿ ಪುತ್ತೂರು ಬ್ಲಡ್ ಬ್ಯಾಂಕ್ ಸಿಬ್ಬಂದಿಗಳಾದ ಸುಜನಿ ಮಾರ್ಟಿನ್,ನಿವೇದಿತ,ಕುಲ್‌ದೀಪ್,ವಿಶ್ವನಾಥ.ರೈ ಮತ್ತಿತರರು ಉಪಸ್ಥಿತರಿದ್ದರು.ಉಪ್ಪಿನಂಗಡಿ ಹಾಗೂ ಕಡಬ ಮಾಡೋವಿ ಸಂಸ್ಥೆಗಳ ಶಾಖಾ ಮೇಲ್ವಿಚಾರಕ ಚಂದ್ರಶೇಖರ ಸನಿಲ್ ಸ್ವಾಗತಿಸಿ,ಮಾಂಡೋವಿ ಮೋಟರ‍್ಸ್ನ ಗ್ರಾಮೀಣ ವಿಭಾಗದ ಅಸಿಸ್ಟೆಂಟ್ ಸೇಲ್ಸ್ ಮ್ಯಾನೇಜರ್ ಸುಜಿತ್ ಕುಮಾರ್ ವಂದಿಸಿದರು. ಉಪ್ಪಿನಂಗಡಿ ಮಾಂಡೋವಿ ಮೋಟರ‍್ಸ್ನ ಸೀನಿಯರ್ ರಿಲೇಶನ್ಶಿಪ್ ಮ್ಯಾನೇಜರ್ ಶ್ರೀ ಹರ್ಷ.ರೈ.ಕೆ ಕಾರ್ಯಕ್ರಮ ನಿರೂಪಿಸಿದರು.


ಮಾಂಡೋವಿ ಮೋಟರ‍್ಸ್ ಕಳೆದ ಮೂವತ್ತೆಂಟು ವರ್ಷಗಳಿಂದ ಗ್ರಾಹಕರಿಗೆ ಉತ್ಕೃಷ್ಟ ಮಟ್ಟದ ಸೇವೆ ಒದಗಿಸುತ್ತಿದೆ.ಇಂದು ಉಪ್ಪಿನಂಗಡಿ ಶಾಖೆಯಲ್ಲಿ ಮಾಂಡೋವಿ ಮೋಟರ‍್ಸ್ ನ ಚರ‍್ಮೃನ್ ಆರೂರ್ ಕಿಶೋರ್ ರಾವ್ ಹುಟ್ಟುಹಬ್ಬ ಹಾಗೂ ಉಪ್ಪಿನಂಗಡಿ ಶಾಖೆಗೆ ೧೧ನೇ ವರ್ಷಾಚರಣೆ ಹಿನ್ನೆಲೆಯಲ್ಲಿ ರಕ್ತದಾನ ಶಿಬಿರವನ್ನು ಹಮ್ಮಿಕೊಂಡಿದೆ ಈ ಮೂಲಕ ಸಾಮಾಜಿಕವಾಗಿಯೂ ಮಾಂಡೋವಿ ಮೋಟರ‍್ಸ್ ಸಿಬ್ಬಂದಿಗಳು ಸ್ಪಂದನೆಯನ್ನು ನೀಡುತ್ತಿದ್ದಾರೆ.ಇದೊಂದು ಮಾದರಿ ಕಾರ್ಯವಾಗಿದ್ದು ನಮ್ಮ ಚೇರ್ ಮೇನ್ ಗೆ ಇನ್ನಷ್ಟು ಒಳಿತಾಗಲಿ ಎಂದು ಹಾರೈಸುತ್ತಿದ್ದೇವೆ ಸುಜಿತ್ ಕುಮಾರ್, ಮಾಂಡೋವಿ ಮೋಟರ‍್ಸ್ನ ಗ್ರಾಮೀಣ ವಿಭಾಗದ ಅಸಿಸ್ಟೆಂಟ್ ಸೇಲ್ಸ್ ಮ್ಯಾನೇಜರ್

 

ಉಪ್ಪಿನಂಗಡಿ ಶಾಖೆಯು ೨೦೧೧ರಲ್ಲಿ ಪ್ರಾರಂಭಗೊಂಡು ಈ ಭಾಗದ ಜನರಿಗೆ ಅತ್ಯುತ್ತಮ ಸೇವೆ ನೀಡುತ್ತಿದೆ.ಪ್ರಾರಂಭದಲ್ಲಿ ನಿಧಾನಗತಿಯಲ್ಲಿದ್ದ ಕಾರು ಮಾರಾಟ ಇದೀಗ ಉತ್ತಮ ಮಾರಟ ಸಂಖ್ಯೆಯನ್ನು ತಲುಪಿದೆ.ಸಂಸ್ಥೆಯೂ ಕೂಡ ವಿಸ್ತೃತಗೊಂಡು ಉತ್ತಮ ಸರ್ವೀಸ್ ನೀಡುತ್ತಿದೆ.ಕೇವಲ ಉಪ್ಪಿನಂಗಡಿ ಮಾತ್ರವಲ್ಲದೆ ಪುತ್ತೂರು,ಪಾಣಾಜೆ,ಕುಶಾಲನಗರ ಮುಂತಾದ ಹೊರಭಾಗಗಳಿಂದಲೂ ಗ್ರಾಹಕರು ನಮ್ಮ ಸೇವೆಯನ್ನು ಮೆಚ್ಚಿಕೊಂಡಿದ್ದಾರೆ.ಮುಂದಕ್ಕೂ ಗ್ರಾಹಕರು ಇದೇ ರೀತಿಯ ಸಹಕಾರ ನೀಡಲಿ ಎಂದು ಅಪೇಕ್ಷಿಸುತ್ತೇವೆ. ಚಂದ್ರಶೇಖರ ಸನಿಲ್,ಉಪ್ಪಿನಂಗಡಿ ಹಾಗೂ ಕಡಬ ಮಾಡೋವಿ ಸಂಸ್ಥೆಗಳ ಶಾಖಾ ಮೇಲ್ವಿಚಾರಕ

ಮಾಂಡೋವಿ ಮೋಟರ‍್ಸ್ನಲ್ಲಿ ಕಾರು ಖರೀದಿ ಮಾಡುವಾಗ ಹಲವಾರು ಕೊಡುಗೆ ಲಭ್ಯವಿದೆ.ವ್ಯಾಗನಾರ್ ಗೆ ೪೯,೧೦೦ರವರೆಗಿನ ಕೊಡುಗೆ,ಸೆಲೆರಿಯಾ ೪೦,೧೦೦ರ ಕೊಡುಗೆ,ಆಲ್ಟೋಗೆ ೩೩,೧೦೦ರ ಕೊಡುಗೆ,ಬ್ರೀಜಾಗೆ ೨೩೫೦೦ರವರೆಗಿನ ಕೊಡುಗೆಗಳು ಇವೆ ಈ ರೀತಿಯ ಅನೇಕ ಕೊಡುಗೆಗಳನ್ನು ಮಾಂಡೊವಿ ಮೋಟರ‍್ಸ್ ಮೂಲಕ ಗ್ರಾಹಕರು ತಮ್ಮದಾಗಿಸಿಕೊಳ್ಳಬಹುದು. ಶ್ರೀ ಹರ್ಷ.ರೈ.ಕೆ, ಉಪ್ಪಿನಂಗಡಿ ಮಾಂಡೋವಿ ಮೋಟರ‍್ಸ್ನ ಸೀನಿಯರ್ ರಿಲೇಶನ್ಶಿಪ್ ಮ್ಯಾನೇಜರ್

LEAVE A REPLY

Please enter your comment!
Please enter your name here