ಪುತ್ತೂರು: ತಾಲೂಕಿನಲ್ಲಿರುವ ಸರಕಾರಿ ಶಾಲೆಗಳ ಶೈಕ್ಷಣಿಕ ಹಾಗೂ ಮೂಲಭೂತ ಅಗತ್ಯತೆಯ ಬಗ್ಗೆ ಹಾಗೂ ಅದಕ್ಕಿರುವ ಪರಿಹಾರ ಎನ್ನುವ ವಿಷಯದಲ್ಲಿ ಎಸ್ಡಿಎಂಸಿ ಸಮನ್ವಯ ವೇದಿಕೆಯ ವತಿಯಿಂದ ಜೂ. 18 ರಂದು ಪುತ್ತೂರಿನಲ್ಲಿ ನಡೆಯಬೇಕಾಗಿದ್ದ ಎಲ್ಲಾ ಸರಕಾರಿ ಶಾಲೆಗಳ ಎಸ್ಡಿಎಂಸಿ ಅಧ್ಯಕ್ಷರುಗಳ, ಸದಸ್ಯರ ಸಮಾಲೋಚನ ಸಭೆಯನ್ನು ಅನಿವಾರ್ಯ ಕಾರಣಗಳಿಂದಾಗಿ ಮುಂದೂಡಲಾಗಿದೆ. ಮುಂದಿನ ದಿನಾಂಕವನ್ನು ತಿಳಿಸಲಾಗುವುದು ಎಂದು ಎಸ್ಡಿಎಂಸಿ ಸಮನ್ವಯ ವೇದಿಕೆಯ ಮೊಯ್ದಿನ್ ಕುಟ್ಟಿ ಹಾಗೂ ಬಶೀರ್ ಕೆದಂಬಾಡಿಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.