ಪುತ್ತೂರು: ಯೋಗ ದಿನಾಚರಣೆಯ ಅಂಗವಾಗಿ ಮುಂಡೂರು ಹಾಲು ಉತ್ಪಾದಕರ ಸಹಕಾರ ಸಂಘದ ವತಿಯಿಂದ ಯೋಗ ದಿನಾಚರಣೆ ಕಾರ್ಯಕ್ರಮ ಸಂಘದ ಸಭಾಭವನದಲ್ಲಿ ನಡೆಯಿತು. ಹಾಲು ಸೊಸೈಟಿಯ ಉಪಾಧ್ಯಕ್ಷ ಉಮೇಶ್ ಗುತ್ತಿನಪಾಲು, ನಿರ್ದೇಶಕ ಅನಿಲ್ ಕಣ್ಣಾರ್ನೂಜಿ, ಮುಂಡೂರು ಗ್ರಾ.ಪಂ ಸದಸ್ಯ ಉಮೇಶ್ ಗೌಡ ಅಂಬಟ, ಕಾರ್ಯದರ್ಶಿ ಜಿನ್ನಪ್ಪ ಸಾಲಿಯಾನ್ ಪರನೀರು, ಹಾಲು ಪರೀಕ್ಷಕ ನಾರಾಯಣ ಶೆಟ್ಟಿ ಅಂಬಟ, ರಾಮಣ್ಣ ಗೌಡ ಪಜಿಮಣ್ಣು, ತಿಮ್ಮಪ್ಪ ಗೌಡ ಗುತ್ತಿನಪಾಲು, ಕೃಷ್ಣರಾಜ ವೈಲಾಯ ಇಡಬೆಟ್ಟು ಮತ್ತು ಗೋಪಾಲ ಮುಂಡೂರು ಪಾಲ್ಗೊಂಡಿದ್ದರು.