ಪುತ್ತೂರು: ಪುತ್ತೂರು ಮಹಿಳಾ ಬಂಟರ ಸಂಘದಿಂದ ಮಹಿಳೆ ಮತ್ತು ಆರೋಗ್ಯ ಕುರಿತು ವಿಶೇಷ ಕಾರ್ಯಾಗಾರ ಜೂ. 18ರಂದು ಪುತ್ತೂರು ಕೊಂಬೆಟ್ಟು ಸುಂದರಾಮ್ ಶೆಟ್ಟಿ ಸ್ಮಾರಕ ಬಂಟರ ಭವನದಲ್ಲಿ ನಡೆಯಿತು.
ಸುಳ್ಯದ ಡಾ. ಶೃತಿ ರೈ ಅವರು ಆರೋಗ್ಯ ಕುರಿತು ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ಪುತ್ತೂರು ಮಹಿಳಾ ಬಂಟರ ಸಂಘದ ಅಧ್ಯಕ್ಷೆ ಸಬಿತಾ ಭಂಡಾರಿ, ಪ್ರಧಾನ ಕಾರ್ಯದರ್ಶಿ ಹರಿಣಾಕ್ಷಿ ಜೆ ಶೆಟ್ಟಿ, ಕೋಶಾಧಿಕಾರಿ ವಾಣಿ ರೈ, ಮಾಜಿ ಅಧ್ಯಕ್ಷೆ ಕುಮುಧಾ ಎಲ್.ಎನ್.ಶೆಟ್ಟಿ, ವಿಶೇಷ ಆಹ್ವಾನಿತೆ ರಮಾಕಾಂತಿ ರೈ, ಉಪಾಧ್ಯಕ್ಷೆ ಜಯಂತಿ ರೈ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಮಹಿಳಾ ಬಂಟರ ಸಂಘದ ಸದಸ್ಯರು ಭಾಗವಹಿಸಿ ಆರೋಗ್ಯದ ಕುರಿತು ಮಾಹಿತಿ ಪಡೆದು ಕೊಂಡರು.