ಪುತ್ತೂರು : ಮಾಯಿದೆ ದೇವುಸ್ ಚರ್ಚ್ ಸಮೂಹ ಶಿಕ್ಷಣ ಸಂಸ್ಥೆಗಳಲ್ಲೊಂದಾದ ಸಂತ ಫಿಲೋಮಿನಾ ಕಾಲೇಜಿನ ಸಮಾಜಶಾಸ್ತ್ರ ವಿಭಾಗದ ಮುಖ್ಯಸ್ಥರು ಮತ್ತು ಎನ್ಸಿಸಿ ಅಧಿಕಾರಿ ಲೆಫ್ಟಿನೆಂಟ್ ಡೇವಿಡ್ ಜಾನ್ಸನ್ ಸಿಕ್ವೇರಾರವರು ಕರ್ನಾಟಕ ಮುಕ್ತ ವಿಶ್ವವಿದ್ಯಾಲಯ, ಮೈಸೂರು ಏರ್ಪಡಿಸಿದ 2019-21ರ ಸಾಲಿನ ಸಮಾಜಶಾಸ್ತ್ರ ಪರೀಕ್ಷೆಯಲ್ಲಿ ರಾಜ್ಯಮಟ್ಟದಲ್ಲಿ ಏಳನೇಯ ರ್ಯಾಂಕ್ ಗಳಿಸಿರುತ್ತಾರೆ.
ಈ ಮೊದಲು ಜೋನ್ಸನ್ ಸಿಕ್ವೇರಾರವರು ಎಂಎಸ್ಡಬ್ಲೂ÷್ಯ ಪದವಿಯೊಂದಿಗೆ ಕಾಲೇಜಿನ ಸಮಾಜಕಾರ್ಯ ವಿಭಾಗದಲ್ಲಿ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿದ್ದರು. ಇವರು ಡೇನಿಯಲ್ ಸಿಕ್ವೇರಾ ಹಾಗೂ ಎವ್ಲಿನ್ ಸಿಕ್ವೇರಾರವರ ಪುತ್ರರಾಗಿದ್ದು ಹಾರಾಡಿಯಲ್ಲಿ ಪತ್ನಿ ಸವಿತಾರವರೊಂದಿಗೆ ವಾಸವಾಗಿದ್ದಾರೆ. ಇವರ ಸಾಧನೆಗೆ ಕಾಲೇಜಿನ ಸಂಚಾಲಕರು, ಪ್ರಾಂಶುಪಾಲರು ಮತ್ತು ಆಡಳಿತ ಮಂಡಳಿ ಪ್ರಶಂಸೆ ವ್ಯಕ್ತಪಡಿಸಿರುತ್ತಾರೆ.